ಪುತ್ತೂರು: ನರೇಂದ್ರ ಪದವಿಪೂರ್ವ ಕಾಲೇಜಿನ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಮಂಗಳೂರು ಕೋಸ್ಟಲ್ ರೌಂಡ್ ಟೇಬಲ್ 190 ವತಿಯಿಂದ ವಿದ್ಯಾರ್ಥಿವೇತನವನ್ನು ವಿತರಿಸಲಾಯಿತು. ಈ ಸಮಾರಂಭದಲ್ಲಿ ಎಂ ಸಿ ಆರ್ ಟಿ ನ ಚೇರ್ಮೆನ್ ಆಶ್ರಯ ಭಂಡಾರಿ, ಕೋಶಾಧಿಕಾರಿಗಳಾದ ಮತ್ತು ಎಂ ಸಿ ಆರ್ ಟಿ ನ ಭಾವಿ ಚೇರ್ಮೆನ್ ದಶರಥ ಶೆಟ್ಟಿ ಮತ್ತು ಪುತ್ತೂರಿನ ಸ್ವರ್ಣೋದ್ಯಮ ಸುಧನ್ವ ಆಚಾರ್ಯರವರು ರೂ 1,50,000 ದ ಚೆಕ್ ನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಕೋಶಾಧಿಕಾರಿಗಳಾದ ಅಚ್ಯುತ ನಾಯಕ್ ರವರಿಗೆ ಹಸ್ತಾಂತರಿಸಿದರು.

ಈ ಸಮಾರಂಭದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀಕಾಂತ್ ಕೊಳತ್ತಾಯ, ಸಂಚಾಲಕ ಸಂತೋಷ್ ಬಿ. ಕೋಶಾಧಿಕಾರಿಯಾದ ಸಂಪತ್ ಕುಮಾರ್, ಸದಸ್ಯರಾದ ಉಮೇಶ್ ನಾಯಕ್ ಮತ್ತು ಪ್ರಾಂಶುಪಾಲರಾದ ಪ್ರಸಾದಶಾನ್ ಭಾಗ್ ಉಪಸ್ಥಿತರಿದ್ದರು.