ಶಿರಾಡಿ ಗ್ರಾ.ಪಂ. ನೂತನ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ

0

ನೆಲ್ಯಾಡಿ: ಅಂದಾಜು 45ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಶಿರಾಡಿ ಗ್ರಾಮ ಪಂಚಾಯತ್‌ನ ನೂತನ ಕಟ್ಟಡಕ್ಕೆ ಶಿರಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಮೀಪ ಮೀಸಲಿಟ್ಟ ಜಾಗದಲ್ಲಿ ಜು.11ರಂದು ಬೆಳಿಗ್ಗೆ ಗುದ್ದಲಿಪೂಜೆ ನೆರವೇರಿಸಲಾಯಿತು.


ಗ್ರಾ.ಪಂ.ಅಧ್ಯಕ್ಷ ಕಾರ್ತಿಕೇಯನ್ ಅವರು ಗುದ್ದಲಿಪೂಜೆ ನೆರವೇರಿಸಿದರು. ಬಳಿಕ ಮಾತನಾಡಿದ ಕಾರ್ತಿಕೇಯನ್ ಅವರು, ಶಿರಾಡಿ ಗ್ರಾಮದ ಕೇಂದ್ರ ಸ್ಥಾನವಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ, ಪಶುಚಿಕಿತ್ಸಾಲಯ, ಸಾರ್ವಜನಿಕ ಗ್ರಂಥಾಲಯ, ಬ್ಯಾಂಕ್ ಸೇರಿದಂತೆ ಬಹುತೇಕ ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳು ಶಿರಾಡಿಯಲ್ಲಿದೆ. ಗ್ರಾ.ಪಂ. ಕಚೇರಿಯನ್ನೂ ಇಲ್ಲಿಗೆ ಸ್ಥಳಾಂತರಿಸುವ ನಿಟ್ಟಿನಲ್ಲಿ ಶಿರಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಮೀಪ ಮೀಸಲಿಟ್ಟ ಜಾಗದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಲಾಗಿದೆ. ಕಟ್ಟಡ ನಿರ್ಮಾಣಕ್ಕೆ ಈಗಾಗಲೇ 8 ಲಕ್ಷ ರೂ.ಅನುದಾನ ಸರಕಾರದಿಂದ ಮಂಜೂರು ಆಗಿದೆ. 20 ಲಕ್ಷ ರೂ. ಉದ್ಯೋಗ ಖಾತ್ರಿ ಯೋಜನೆಯ ಅನುದಾನ ಬಳಕೆ ಮಾಡಲಾಗುವುದು. ಉಳಿದಂತೆ ಬೇರೆ ಅನುದಾನಗಳನ್ನು ಸೇರಿಸಿಕೊಂಡು 45 ಲಕ್ಷ ರೂ.ಅನುದಾನದಲ್ಲಿ ಹೊಸ ಕಟ್ಟಡ ನಿರ್ಮಾಣ ಆಗಲಿದೆ ಎಂದರು.


ಈ ಸಂದರ್ಭದಲ್ಲಿ ಗ್ರಾ.ಪಂ.ಉಪಾಧ್ಯಕ್ಷೆ ವಿನೀತಾ ತಂಗಚ್ಚನ್, ಸದಸ್ಯ ಸಣ್ಣಿಜಾನ್, ಶಿರಾಡಿ ಗ್ರಾ.ಪಂ.ನಲ್ಲಿ ಈ ಹಿಂದೆ ಪಿಡಿಒ ಆಗಿದ್ದು ಪ್ರಸ್ತುತ ಉಳ್ಳಾಲ ತಾ.ಪಂ.ನಲ್ಲಿ ಸಹಾಯಕ ನಿರ್ದೇಶಕರಾಗಿರುವ ವೆಂಕಟೇಶ್, ಜಿ.ಪಂ.ಮಾಜಿ ಸದಸ್ಯ ಪಿ.ಪಿ.ವರ್ಗೀಸ್, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ನಿರ್ದೇಶಕರಾದ ಸುದರ್ಶನ ಶಿರಾಡಿ, ಶಶಿಧರ ಶಿರಾಡಿ, ಮಂಡಲ ಪಂಚಾಯತ್ ಮಾಜಿ ಸದಸ್ಯ ದಿವಾಕರ ಗೌಡ ಉದನೆ, ಗ್ರಾ.ಪಂ.ಮಾಜಿ ಉಪಾಧ್ಯಕ್ಷ ತಂಬಿ, ವಿದ್ಯುತ್ ಗುತ್ತಿಗೆದಾರ ಅಭಿಲಾಷ್ ಪಿ.ಕೆ., ಗ್ರಾಮಸ್ಥರಾದ ಎನ್.ಜೆ.ದೇವಸ್ಯ, ಸಣ್ಣಿ ಅಗಸ್ಟಿನ್, ಸಾಬು ಆಚಾರಿ, ಕೆ.ಯು.ಜಾನ್, ಮನೋಜ್ ಜೋಯಿಸ್, ರಾಜೇಶ್ ಕೆ.ಎ., ಜಿನಿ ಜೇಕಬ್, ಸೆಬಾಸ್ಟಿನ್ ಶಿರಾಡಿ, ಜೋಯಿ ಒಡಂಬಳ್ಳಿ, ತೋಮಸ್ ಒಡಂಬಳ್ಳಿ, ಪಿ.ಎಂ.ಜೋನ್, ಜಾನ್ಸನ್ ಪಿ.ಸಿ., ಅಬ್ರಹಾಂ ಪಿ.ಪಿ., ವಿನೋದ್, ಗಣೇಶ್ ಡಿ.ಜೆ., ಸಿಬಿ ಕೆ.ಕೆ., ಸಿಜು ಕೆ.ಕೆ., ಸುರೇಂದ್ರನ್ ಕೆ.ಆರ್., ಕೆ.ವಿಜಯಕುಮಾರ್, ಬಾಬು ಏಲಿಯಾಸ್, ಪಿ.ಎಂ.ಮಾರ್ಕೋಸ್, ವಿಲಿಯಮ್ಸ್ ಶಿರಾಡಿ, ಸಂಜೀವಿನಿ ಒಕ್ಕೂಟದ ಕಲಾಸಣ್ಣಿ, ಆಲಿಸ್‌ಜೋಸ್, ಪ್ರಿಯಾ, ಬಿಂದುರೆಜಿ ಮತ್ತಿತರರು ಉಪಸ್ಥಿತರಿದ್ದರು.


ಪಿಡಿಒ ಯಶವಂತ ಬೆಳ್ಚಡ ಸ್ವಾಗತಿಸಿ, ನಿರೂಪಿಸಿದರು. ಕಾರ್ಯದರ್ಶಿ ಶಾರದಾ ವಂದಿಸಿದರು. ಸಿಬ್ಬಂದಿಗಳಾದ ಏಲಿಯಾಸ್ ಕೆ.ಸಿ., ಸ್ಮಿತಾ, ವಿಜಯಾ, ತೋಮಸ್ ವಿ.ಎ., ಸುನೀಲ್ ಪಿ.ವಿ., ಗ್ರಂಥಾಲಯ ಮೇಲ್ವಿಚಾರಕಿ ರೇಖಾ ಮತ್ತಿತರರು ಸಹಕರಿಸಿದರು.

LEAVE A REPLY

Please enter your comment!
Please enter your name here