ಪುತ್ತೂರು: ಇತ್ತೀಚೆಗೆ ಅಂಬಾರು ಸದಾಶಿವ ಕ್ಷೇತ್ರದಲ್ಲಿ ನಡೆದ ನವಗ್ರಹ ಸಹಿತ ಪಾರ್ವತಿ ಸ್ವಯಂವರ ಯಾಗದ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಖ್ಯಾತ ದೈವ ನರ್ತಕ ಮತ್ತು ಉಪನ್ಯಾಸಕರಾದ ಡಾ. ರವೀಶ್ ಪಡುಮಲೆ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕೊಂಡೆವೂರು ಮಠದ ಶ್ರೀ ಗಳಾದ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ, ಡಾ. ಸದಾಶಿವ ಶೆಟ್ಟಿ ಕುಳೂರು, ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ಸದಸ್ಯರಾದ ಮಲ್ಲಿಕಾ ಪಕ್ಕಳ ಮಲಾರ್ ಬೀಡು ಸಹಿತ ಅನೇಕ ಗಣ್ಯರು ಉಪಸ್ಥಿತರಿದ್ದರು.
