ಕೊಳ್ತಿಗೆ ‌ಶಾಲಾ‌ ಹಳೆ‌ ವಿದ್ಯಾರ್ಥಿ ಸಂಘಕ್ಕೆ ನೂತನ‌ ಪದಾಧಿಕಾರಿಗಳ ಆಯ್ಕೆ

0

ಪುತ್ತೂರು: ಕೊಳ್ತಿಗೆ ‌ಶಾಲಾ‌ ಹಳೆ ವಿದ್ಯಾರ್ಥಿ ಸಂಘಕ್ಕೆ ನೂತನ‌ ಪದಾಧಿಕಾರಿಗಳ ಆಯ್ಕೆಯು ಜು.13 ರಂದು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಜಯತ್ ಕೆಮ್ಮಾರರವರ ಅಧ್ಯಕ್ಷತೆಯಲ್ಲಿ ನಡೆಯಿತು.
2025-26 ನೇ ಸಾಲಿನ ಹಳೆ‌ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರಾಗಿ ಕೃಷ್ಣಪ್ಪ ಗೌಡ ಬಾಯಂಬಾಡಿ, ಅಧ್ಯಕ್ಷರಾಗಿ ಅರುಣ್ ಕುಮಾರ್ ಆಟೋಳಿ, ಉಪಾಧ್ಯಕ್ಷರಾಗಿ ಅನುಷ್ ರೈ ಕೆಳಗಿನಮನೆ, ಕಾರ್ಯದರ್ಶಿಯಾಗಿ ಸಂತೋಷ್ ಬಾಯಂಬಾಡಿ, ಜೊತೆ ಕಾರ್ಯದರ್ಶಿಯಾಗಿ ಲೋಹಿತ್ ಬಾರಿಕೆ, ಖಜಾಂಚಿಯಾಗಿ ಚೇತನ್ ಕುದ್ಕುಳಿ, ಕ್ರೀಡಾ ಕಾರ್ಯದರ್ಶಿಯಾಗಿ ಪ್ರವೀಣ್ ಕೆಮ್ಮಾರ, ಸಾಂಸ್ಕೃತಿಕ ‌ಕಾರ್ಯದರ್ಶಿಯಾಗಿ ಜಯತ್ ಕೆಮ್ಮಾರ ಇವರುಗಳನ್ನು ಆಯ್ಕೆ ಮಾಡಲಾಯಿತು.


ಈ ಸಂದರ್ಭದಲ್ಲಿ ಸಂಘದ ಸದಸ್ಯರುಗಳ‌ ಉಪಸ್ಥಿತಿಯಲ್ಲಿ ನೂತನ‌ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಾಯಿತು.
ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ವಿಜೇಶ್ ರೈ ಕೆಳಗಿನಮನೆ ಸ್ವಾಗತಿಸಿ, ವಂದಸಿದರು.

LEAVE A REPLY

Please enter your comment!
Please enter your name here