ಜು.29-30:ಕೆಮ್ಮಿಂಜೆ ದೇವಸ್ಥಾನದಲ್ಲಿ ನಾಗರ ಪಂಚಮಿ, ತಿಂಗಳ ಷಷ್ಠಿ ಕಾರ್ಯಕ್ರಮ

0

ಪುತ್ತೂರು: ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಜು.29 ರಂದು ನಾಗರ ಪಂಚಮಿ ಹಾಗೂ ಜು.30 ರಂದು ತಿಂಗಳ ಷಷ್ಠಿ ಕಾರ್ಯಕ್ರಮ ಜರಗಲಿದೆ.
ಮಂಗಳವಾರದಂದು ಬೆಳಿಗ್ಗೆ 7.00 ರಿಂದ ಮಧ್ಯಾಹ್ನ 12.00ರ ವರೆಗೆ ನಾಗಬನದಲ್ಲಿ ನಾಗರಪಂಚಮಿ ಪ್ರಯುಕ್ತ ತಂಬಿಲ ಸೇವೆ. ತದ ನಂತರ ಮಹಾಪೂಜೆ(ಸೇವಾ ದರ:ರೂ.150/-), ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ಬುಧವಾರದಂದು ನಡೆಯುವ ತಿಂಗಳ ಷಷ್ಠಿ ಕಾರ್ಯಕ್ರಮದಲ್ಲಿ ಹಾಲು ಪಾಯಸ ಸೇವೆ(ಸೇವಾ ದರ ರೂ.100), ಮಹಾಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ ಜರಗಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೇವರ ಪ್ರಸಾದವನ್ನು ಸ್ವೀಕರಿಸಬೇಕಾಗಿ ಹಾಗೂ ಹೆಚ್ಚಿನ ಮಾಹಿತಿಗಾಗಿ 9980223709, 7795711499 ನಂಬರಿಗೆ ಸಂಪರ್ಕಿಸಬಹುದು ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪೂಜಾರಿ ಬೆದ್ರಾಳರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here