ಕುಂಬ್ರ: ಬ್ಲಾಕ್ ಕಾಂಗ್ರೆಸ್ ಸಹಾಯ ನಿಧಿಯಿಂದ ಉತ್ತರಕ್ರಿಯಾಧಿ ಕಾರ್ಯಕ್ಕೆ ಅಕ್ಕಿ ಸಹಾಯ

0

ಪುತ್ತೂರು: ಒಳಮೊಗ್ರು ಗ್ರಾಮದಲ್ಲಿ ಇತ್ತೀಚೆಗೆ ನಿಧನ ಹೊಂದಿದ ಇಬ್ಬರು ಪರಿಶಿಷ್ಟ ಜಾತಿಯ ಕುಟುಂಬಕ್ಕೆ ಮರಣ ಹೊಂದಿದ ವ್ಯಕ್ತಿಗಳ ಉತ್ತರಕ್ರಿಯೆಗೆ ಸಹಾಯಾರ್ಥವಾಗಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಸಹಾಯ ನಿಧಿಯಿಂದ ಒಳಮೊಗ್ರು ಗ್ರಾಮ ವಲಯ ಕಾಂಗ್ರೆಸ್ ಸಮಿತಿ ಮೂಲಕ ಎರಡು ಮನೆಗಳಿಗೆ ತಲಾ 30 ಕೆ.ಜಿ ಅಕ್ಕಿಯನ್ನು ವಿತರಿಸಲಾಯಿತು. ಒಳಮೊಗ್ರು ಗ್ರಾಮದ ಚನಿಯ ಮತ್ತು ನಾಗಮ್ಮರವರ ಮನೆಗೆ ಅಕ್ಕಿ ಸಹಾಯ ನೀಡಲಾಗಿದ್ದು ಈ ಸಂದರ್ಭದಲ್ಲಿ ಒಳಮೊಗ್ರು ಗ್ರಾಮ ವಲಯ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಅಶೋಕ್ ಪೂಜಾರಿ ಬೊಳ್ಳಾಡಿ, ಗ್ರಾಪಂ ಸದಸ್ಯ ಶೀನಪ್ಪ ನಾಯ್ಕ ಮುಡಾಲ ಮತ್ತು ವಿನೋದ್ ಶೆಟ್ಟಿ ಮುಡಾಲ, ಮಹಮ್ಮದ್ ಬೊಳ್ಳಾಡಿ, ಚೆನ್ನ ಕುಂಬ್ರ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here