ಪುತ್ತೂರು: ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ಈಶ್ವರಮಂಗಲ ಇದರ ವಾರ್ಷಿಕ ಮಹಾಸಭೆಯು ಕಾರಂತ್ ಬಿಲ್ಡಿಂಗ್ ಸಭಾಂಗಣದಲ್ಲಿ ಜು.12ರಂದು ನಡೆಯಿತು. ಈ ಸಭೆಯಲ್ಲಿ ಮುಂದಿನ ಅವಧಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಸುಜಾತಾ ಸುಳ್ಯಪದವು, ಉಪಾಧ್ಯಕ್ಷರಾಗಿ ವಿಶ್ವನಾಥ ಸುಳ್ಯಪದವು, ಕಾರ್ಯದರ್ಶಿಯಾಗಿ ಶೋಭಾ ಅದಿಂಜ, ಕೋಶಾಧಿಕಾರಿಯಾಗಿ ರತ್ನಾವತಿ ಪಿ ಕಂಟ್ರಮಜಲ್, ಜೊತೆ ಕಾರ್ಯದರ್ಶಿ ಕಸ್ತೂರಿ ರೈ ಕಂಟ್ರಮಜಲ್, ಸಂಘಟನಾ ಕಾರ್ಯದರ್ಶಿಯಾಗಿ ರೇವತಿ ಸಿ ಏನ್ ಕಾವು, ಕ್ಷೇತ್ರಸಮಿತಿ ಸದಸ್ಯರನ್ನಾಗಿ ವೆಂಕಪ್ಪ ಈಶ್ವರಮಂಗಲ, ಗಣೇಶ್ ಈಶ್ವರಮಂಗಲ, ಅನುಪಮಾ ಈಶ್ವರಮಂಗಲ, ಸೀತಾರಾಮ ಕಾವು, ಶೋಭಾ ಎಸ್ ಕಾವು, ಲತಾಕುಮಾರಿ ಸುಳ್ಯಪದವು, ಶ್ರೀಮತಿ ಸುಳ್ಯಪದವು ಇವರನ್ನು ಆಯ್ಕೆ ಮಾಡಲಾಯಿತು.
ಈ ಸಂರ್ಭದಲ್ಲಿ ಜಿಲ್ಲಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಜಯಂತ್ ಉರ್ಲಾಂಡಿ,ಜಿಲ್ಲಾ ಜೊತೆ ಕಾರ್ಯದರ್ಶಿ ಸುರೇಖಾ ನಿಡ್ಪಳ್ಳಿ, ಕ್ಷೇತ್ರ ಸಮಿತಿ ಕೋಶಾಧಿಕಾರಿ ಪರಮೇಶ್ವರ್ ಅನಿಲ ಉಪಸ್ಥಿತರಿದ್ದರು.