ಪುತ್ತೂರು: ಸ.ಉ.ಪ್ರಾ.ಶಾಲೆ, ಕೆಮ್ಮಾಯಿ ಇಲ್ಲಿ ಆ.6ರಂದು ನಡೆದ ಪುತ್ತೂರು ನಗರ ವಲಯ ಮಟ್ಟದ ಚೆಸ್ ಪಂದ್ಯಾಟದಲ್ಲಿ ಶ್ರೀ ರಾಮಕೃಷ್ಣ ಪ್ರೌಢಶಾಲೆ, ಪುತ್ತೂರು ಇಲ್ಲಿಯ 10ನೇ ತರಗತಿಯ ಶ್ರವಣ್ ಎಂ ಕೋಡಿಂಬಾಡಿ ವಿಶ್ವಕುಮಾರ್ ಎಂ ಮತ್ತು ವೀಣಾ ಎಂ ದಂಪತಿಗಳ ಪುತ್ರ 17ರ ವಯೋಮಿತಿಯ ಬಾಲಕರ ಚೆಸ್ ಪಂದ್ಯಾಟದಲ್ಲಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕರಾದ ಅಜಿತ್ ರವರು ಮಾರ್ಗದರ್ಶನ ನೀಡಿರುತ್ತಾರೆ ಎಂದು ಶಾಲಾ ಸಂಚಾಲಕರಾದ ಹೇಮನಾಥ ಶೆಟ್ಟಿ ಕಾವು ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
