ಹಿರೇಬಂಡಾಡಿ: ಮಂಜುಶ್ರೀ ಸೇವಾ ಟ್ರಸ್ಟ್, ಮಂಜುಶ್ರೀ ಭಜನಾ ಮಂದಿರ ಶಿವನಗರ ಹಿರೇಬಂಡಾಡಿ ಇದರ ಆಶ್ರಯದಲ್ಲಿ ನಡೆಯುವ 13ನೇ ವರ್ಷದ ನವರಾತ್ರಿ ಉತ್ಸವದ ಭಜನಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಯು ಮಂಜುಶ್ರೀ ಭಜನಾ ಮಂದಿರದಲ್ಲಿ ಜರಗಿತು.

ಅಧ್ಯಕ್ಷ ಚಂದ್ರಶೇಖರ ನಾಯ್ಕ್ ಮುರದಮೇಲು, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಮಾಧವ ಹೆನ್ನಾಳ, ಕಾರ್ಯದರ್ಶಿ ಪದ್ಮನಾಭ ಪಾಲೆತ್ತಡಿ, ಪ್ರಮುಖರಾದ ಅಶೋಕ ಕುಮಾರ್ ಪಡ್ಪು, ನಿತ್ಯಾನಂದ ದರ್ಬೆ, ಲಕ್ಷ್ಮೀಶ ನಿಡ್ಡೆಂಕಿ, ಅರ್ಪಿತ್ ಕುಬಲ, ನೋಣಯ್ಯ ಪೂಜಾರಿ ದರ್ಖಾಸು, ರವೀಂದ್ರ ರೈ ಶಿವನಗರ, ರೋಹಿತ್ ಸರೋಳಿ ಮತ್ತಿತರರು ಉಪಸ್ಥಿತರಿದ್ದರು.