ಪುತ್ತೂರು: ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ನಡೆದ ಮೈಸೂರು ವಿಭಾಗದ 17ರ ವಯೋಮಿತಿಯ ಕ್ರಿಕೆಟ್ ಪಂದ್ಯಾಟದಲ್ಲಿ ಪುತ್ತೂರು ಸುದಾನ ವಸತಿ ಶಾಲೆ ಇದರ 10ನೇ ತರಗತಿಯ ವಿದ್ಯಾರ್ಥಿ ಮನೀಶ್.ಯು.ಶೆಟ್ಟಿ ದಕ್ಷಿಣ ಕನ್ನಡ ಜಿಲ್ಲಾ ತಂಡವನ್ನು ಪ್ರತಿನಿಧಿಸಿ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಇವರು ಇಡ್ಕಿದು ಗ್ರಾಮದ ಅರ್ಕೆಚ್ಚಾರು ಉಮೇಶ್ ಶೆಟ್ಟಿ ಮತ್ತು ಭಾರತಿ ಉಮೇಶ್ ಶೆಟ್ಟಿ ದಂಪತಿಗಳ ಪುತ್ರ. ಇವರು ಪುತ್ತೂರು ಸುದಾನ ಕ್ರಿಕೆಟ್ ಅಕಾಡೆಮಿಯ ಕಿರಣ್ ಕುಮಾರ್ ಮತ್ತು ನವೀನ್ ಕಡಬ ಇವರಿಂದ ತರಬೇತಿ ಪಡೆಯುತ್ತಿದ್ದಾರೆ.