ಫೇಸ್ ಬುಕ್‌ನಲ್ಲಿ ಶಾಸಕ ಅಶೋಕ್ ರೈ, ಸಿಎಂ ಬಗ್ಗೆ ಅವಹೇಳನಕಾರಿ ಕಮೆಂಟ್ – ಕ್ಷಮೆ ಕೇಳಿದ ವಸಂತ ಭಟ್

0

ಪುತ್ತೂರು: ಫೇಸ್ ಬುಕ್ ಖಾತೆಯಲ್ಲಿ ಶಾಸಕ ಅಶೋಕ್ ಕುಮಾರ್ ರೈ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಅವಹೇಳನಕಾರಿ ಮೆಸೇಜ್ ಹಾಕಿದ್ದ ವಸಂತ ಭಟ್ ಎಂಬವರು ಕ್ಷಮೆ ಯಾಚಿಸಿರುವ ಘಟನೆ ಅ.14ರಂದು ನಡೆದಿದೆ.


ಮೆಸೇಜ್ ಹಾಕಿರುವ ವಸಂತ ಭಟ್ ವಿರುದ್ದ ಪುತ್ತೂರು ಬ್ಲಾಕ್ ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಘಟಕದ ಅಧ್ಯಕ್ಷ ಸುಪ್ರೀತ್ ಕಣ್ಣಾರಾಯ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಂತೆ ವಸಂತ ಭಟ್ ಅವರು ಅ.14ರಂದು ಬೆಳಗ್ಗೆ ಶಾಸಕರ ನಿವಾಸಕ್ಕೆ ಬಂದು ‘ನಾನು ತಪ್ಪು ಮಾಡಿದ್ದೇನೆ ನನಗೆ ಕ್ಷಮಿಸಿ. ಇನ್ನೆಂದೂ ಕೆಟ್ಟ ಕಮೆಂಟ್ ಹಾಕುವುದಿಲ್ಲ.ನನ್ನನ್ನು ಕ್ಷಮಿಸಿ, ನನ್ನನ್ನು ಪೊಲೀಸರು ಹುಡುಕುತ್ತಿದ್ದಾರೆ.ನನ್ನನ್ನು ಬಂಧಿಸದಂತೆ ಪೊಲೀಸರಿಗೆ ಹೇಳಿ ಎಂದು ಬೇಡಿಕೊಂಡಿದ್ದಾರೆ.

‘ನೀವು ಕೆಟ್ಟ ಕಮೆಂಟ್ ಯಾಕೆ ಹಾಕುತ್ತೀರಿ?ನಾನು ನಿಮಗೇನಾದರೂ ಅನ್ಯಾಯ ಮಾಡಿದ್ದೇನಾ? ವಿದ್ಯಾವಂತರಿದ್ದೀರಿ.ಸಭ್ಯರಿದ್ದೀರಿ, ಯಾಕೆ ಇಂಥ ಕೆಲಸಕ್ಕೆ ಹೋಗುತ್ತೀರಿ?’ ಎಂದು ಕೇಳಿದ ಶಾಸಕರು ‘ಮುಂದೆ ಇಂಥ ನೀಚ ಕೆಲಸಕ್ಕೆ ಹೋಗಬೇಡಿ’ ಎಂದು ಬುದ್ದಿವಾದ ಹೇಳಿ ಕ್ಷಮಿಸಿ ಕಳುಹಿಸಿದ್ದಾರೆ.ವಸಂತ ಭಟ್ ಅವರ ಜೊತೆ ಅವರ ಸಂಬಂಧಿಕರು ಬಂದಿದ್ದರು.

LEAVE A REPLY

Please enter your comment!
Please enter your name here