ಪುತ್ತೂರು: ಪುತ್ತೂರು ಕಬಕ ಗ್ರಾಮದ ನೆಹರುನಗರ ಸಿಟಿಗುಡ್ಡೆಯಲ್ಲಿ ಮನೆಯಿಂದ ಚಿನ್ನಾಭರಣ ಕಳವು ಮಾಡಿದ ಆರೋಪಿಯನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ.
ಸಿಟಿಗುಡ್ಡೆ ನಿವಾಸಿ ಪ್ರವೀಣ್ (27ವ) ಎಂಬವರು ಕಳವು ಮಾಡಿದ ಆರೋಪಿ. ಅ.12ರಂದು ಮೋಹನ್ ಅವರ ಮನೆಯಲ್ಲಿ ಯಾರು ಇಲ್ಲದ ವೇಳೆ ಹಾಡಹಗಲೇ ಕಳವು ನಡೆದಿತ್ತು. ಮನೆ ಮಂದಿ ಸಂಜೆ ಮನೆಗೆ ಬಂದಾಗ ಕಳವು ನಡೆದಿರುವುದು ಬೆಳಕಿಗೆ ಬಂದಿತ್ತು. ಕಳ್ಳರು ಚಿನ್ನದ ಬಳೆ, ಕಿವಿಯೋಲೆ, ಚಿನ್ನದ ಸರ ಮತ್ತು ನಗದು ಹಣ ಕಳವು ಮಾಡಿದ್ದರು. ಈ ಕುರಿತು ಮನೆಯ ರೇವತಿ ಎಂಬವರು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ತನಿಖೆ ನಡೆಸಿದ ಪೊಲೀಸರು ಸ್ಥಳೀಯ ನಿವಾಸಿ ಆರೋಪಿ ಪ್ರವೀಣ್ ಎಂಬವರು ವಶಕ್ಕೆ ಪಡೆದು ಕೊಂಡು ಆತನಿಂದ ಕಳವಾದ ಚಿನ್ನಾಭರಣ ಮತ್ತು ನಗದನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.