ರಾಜ್ ಜ್ಯುವೆಲರ್‍ಸ್ ನಲ್ಲಿ ಲಕ್ಷ್ಮೀ ಪೂಜೆ

0

ಪುತ್ತೂರು: ಕಳೆದ 28 ವರ್ಷಗಳಿಂದ ಗ್ರಾಹಕರ ಮೆಚ್ಚುಗೆಗೆ ಪಾತ್ರರಾದ ಕೋರ್ಟ್ ರಸ್ತೆಯ ಡಿಸೈನರ್ ಕಾಂಪ್ಲೆಕ್ಸ್‌ನಲ್ಲಿ ವ್ಯವಹರಿಸುತ್ತಿರುವ ರಾಜ್ ಜ್ಯುವೆಲರ್‍ಸ್ 29ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದು, ಅ.21ರಂದು ದೀಪಾವಳಿ ಹಬ್ಬದ ಪ್ರಯುಕ್ತ ಧನಲಕ್ಷ್ಮಿ ಪೂಜೆ ನಡೆಯಿತು.


ಬೆಳಿಗ್ಗೆ ವೈದಿಕ ಹರಿಪ್ರಸಾದ್ ಭಟ್ ಬೀಡಿಗೆರವರ ಪೌರೋಹಿತ್ಯದಲ್ಲಿ ಶ್ರೀ ಧನಲಕ್ಷ್ಮೀ ಪೂಜೆ, ಪ್ರಸಾದ ವಿತರಣೆ ನಡೆಯಿತು.


ಹಲವಾರು ಗ್ರಾಹಕರು, ಹಿತೈಷಿಗಳು ಹಾಗೂ ಗಣ್ಯರು ಆಗಮಿಸಿ ಶುಭ ಹಾರೈಸಿದರು. ಸಂಸ್ಥೆಯ ಮಾಲಕ ರಾಜಶೇಖರ್ ಆಚಾರ್ಯ, ಪತ್ನಿ ರೇಖಾ ರಾಜ್’ಶೇಖರ್ ಆಚಾರ್ಯ, ಪುತ್ರ ರೂಪಕ್ ಆಚಾರ್ಯ ಅತಿಥಿಗಳನ್ನು ಸತ್ಕರಿಸಿದರು.  ಮನೀಷ್,ಮನ್ವಿತ್,ಉಮೇಶ್,ಸುಹಾನ್,ಸುಧಾಕರ, ಪ್ರವೀಣ ಹಾಗೂ ಸಂಸ್ಥೆಯ ಸಿಬ್ಬಂದಿಗಳಾದ ಪ್ರವೀಣ್ ಆಚಾರ್ಯ, ತೇಜಸ್ವಿ, ಅನ್ನಪೂರ್ಣ ಸಹಕರಿಸಿದರು.

LEAVE A REPLY

Please enter your comment!
Please enter your name here