ನೆಲ್ಯಾಡಿ: ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರಕನ್ನಡ ಜಿಲ್ಲೆಯನ್ನು ಒಳಗೊಂಡ ಜೇಸಿಐ ಭಾರತದ ವಲಯ 15ರ ವಾರ್ಷಿಕ ವಲಯ ಸಮ್ಮೇಳನ ’ಕಹಳೆ’ ಜೇಸಿಐ ಮಂಗಳೂರು ಸಾಮ್ರಾಟ್ ಘಟಕದ ಆತಿಥ್ಯದಲ್ಲಿ ಅ.18 ಮತ್ತು 19 ರಂದು ಸ್ವಸ್ತಿಕ ವಾಟರ್ ಫ್ರಂಟ್, ಸುಲ್ತಾನ್ ಬತ್ತೇರಿ ಮಂಗಳೂರಿನಲ್ಲಿ ನಡೆಯಿತು.
ಸಮ್ಮೇಳನದಲ್ಲಿ ಜೆಸಿಐ ವಲಯಾಧ್ಯಕ್ಷ ಅಭಿಲಾಷ್ ಬಿ.ಎ., ವಲಯದ ಪ್ರಥಮ ಲೇಡಿ ಜೇಸಿ ಶೀಲಾ ಅಭಿಲಾಷ್ ಅವರು ವಲಯದ ಪ್ರತಿಷ್ಠಿತ ಉದಕ ಪತ್ರಿಕೆಯ ಸಂಪಾದಕರಾಗಿ ಒಂಭತ್ತು ಸಂಚಿಕೆಗಳನ್ನು ಬಿಡುಗಡೆ ಮಾಡಿರುವುದನ್ನು ಗುರುತಿಸಿ, ಉಪ್ಪಿನಂಗಡಿ ಜೇಸಿಐ ಘಟಕದ ಪೂರ್ವಾಧ್ಯಕ್ಷ, ಕಾಂಚನ ತೋಟದಮನೆ ನಿವಾಸಿ ಮೋಹನ್ಚಂದ್ರರಿಗೆ ಅತ್ಯುತ್ತಮ ವಲಯ ಸಂಯೋಜಕ ವಿನ್ನರ್ ಪ್ರಶಸ್ತಿ ನೀಡಿ ಗೌರವಿಸಿದರು. ಇವರು ವಲಯ 15ರ ಪ್ರತಿಷ್ಠಿತ ಉದಕ ಪತ್ರಿಕೆಯ ಸಂಪಾದಕರಾಗಿ ಎರಡನೇ ಬಾರಿಗೆ ಆಯ್ಕೆಯಾಗಿದ್ದರು. ಇವರು ವೃತ್ತಿಯಲ್ಲಿ ಉಪನ್ಯಾಸಕರಾಗಿದ್ದು ಎನ್ಎಂಪಿಯು ಕಾಲೇಜು ಅರಂತೋಡು,ಸುಳ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.