ಪುತ್ತೂರು: ಮಂಗಳೂರಿನ ಸೈಂಟ್ ಜೆರೋಸಾ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಸುದಾನ ಶಾಲೆಯು ಪ್ರಥಮ ಸ್ಥಾನ ಪಡೆದಿದ್ದು, ನಂತರ ಅ.16ರಂದು ಚಿಕ್ಕಮಗಳೂರಿನ ಸೈಂಟ್ ಜೋಸೆಫ್ ಶಾಲೆಯಲ್ಲಿ ನಡೆದ ವಿಭಾಗೀಯ ಮಟ್ಟದ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿದೆ.
ಈ ನಾಟಕದಲ್ಲಿ 8ನೇ ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಾದ ಮಾನ್ವಿ ವಿಶ್ವನಾಥ್, ಧ್ರುತಿ ವಿ ಶೆಟ್ಟಿ, ಇಂಪನಾ ಸಿ ಭಟ್, ಎ ಟಿ ಮಾಧುರ್ಯ, ಸೃಷ್ಟಿ ಎನ್.ವಿ, ದರ್ಶಿಕಾ ನಾಕ್, ಆಶ್ರಿತ್ ಕೃಷ್ಣ ರಾವ್ ಡಿ, ಮತ್ತು ರಿಷಭ್ ರಾಮ್ ಭಾಗವಹಿಸಿದ್ದರು.
ಶಾಲಾ ವಿಜ್ಞಾನ ಶಿಕ್ಷಕಿ ಪೂಜಾ ಎಂ. ವಿ ಇವರು ರಚಿಸಿದ ನಾಟಕದಲ್ಲಿ 8ನೇ ತರಗತಿಯ ಇಂಪನಾ ಸಿ ಭಟ್ ಉತ್ತಮ ನಟಿ ಪ್ರಶಸ್ತಿ ಹಾಗೂ ಶಾಲಾ ಶಿಕ್ಷಕ ಸದಾಶಿವ ಭಟ್ ಉತ್ತಮ ನಿರ್ದೇಶಕ ಪ್ರಶಸ್ತಿ ಪಡೆದಿದ್ದಾರೆ. ಶಾಲಾ ಸಂಚಾಲಕರಾದ ರೆ. ವಿಜಯ ಹಾರ್ವಿನ್, ಆಡಳಿತಾಧಿಕಾರಿ ಸುಶಾಂತ್ ಹಾರ್ವಿನ್, ಶಾಲಾ ಆಡಳಿತ ಮಂಡಳಿ ಮತ್ತು ಮುಖ್ಯ ಶಿಕ್ಷಕಿ ಶೋಭಾ ನಾಗರಾಜ್ ವಿದ್ಯಾರ್ಥಿಗಳನ್ನು ಅಭಿನಂದಿಸಿ ಶುಭ ಹಾರೈಸಿದರು. ಈ ನಾಟಕವು ಶಾಲೆಯ ವಿಜ್ಞಾನ ಸಂಘ ‘ಅವನಿ’ಯ ಸಹಯೋಗದಲ್ಲಿ ನಿರ್ಮಾಣವಾಗಿದೆ.