ಕೆಮ್ಮಿಂಜೆ ದೇವಸ್ಥಾನದ ಷಷ್ಠಿ ಮಹೋತ್ಸವದ ಪ್ರಯುಕ್ತ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯ

0

ಪುತ್ತೂರು: ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ನವೆಂಬರ್‌ 25 ಹಾಗೂ 26ರಂದು ಪೂರ್ವಶಿಷ್ಠ ಸಂಪ್ರದಾಯದ ಪ್ರಕಾರ ಪಂಚಮಿ ಉತ್ಸವ ಹಾಗೂ ಷಷ್ಠಿ ಮಹೋತ್ಸವವು ವಿಜ್ರಂಭಣೆಯಿಂದ ಜರಗಲಿದ್ದು, ಆ ಪ್ರಯುಕ್ತ ನ.9ರಂದು ದೇವಸ್ಥಾನದ ಒಳಗೆ, ಹೊರಗೆ ಹಾಗೂ ದೈವ ಸಾನಿಧ್ಯಗಳ ಸ್ವಚ್ಛತೆ ಕಾರ್ಯ ಭಕ್ತರು ಸ್ವಯಂಸೇವಕರಾಗಿ ಸಂಪೂರ್ಣ ಸಹಕಾರದೊಂದಿಗೆ ಶ್ರೀ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪೂಜಾರಿ ಬೆದ್ರಾಳರವರ ನೇತೃತ್ವದಲ್ಲಿ ನೆರವೇರಿತು.

ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವಸಂತ ಕುಮಾರ್ ನಾಯ್ಕ, ಮಹೇಶ್ ಬಿ, ರೇಖಾ ಯಶೋಧರ ಗೌಡ ಬಿ.ಎಸ್, ಸೂರಪ್ಪ ಗೌಡ, ಚಂದ್ರಶೇಖರ ಕಲ್ಲಗುಡ್ಡೆ, ರಕ್ಷಿತ್ ನಾಯ್ಕ್, ಲಲಿತಾ ಕೆ, ಗುಮಾಸ್ತ ಭರತ್, ರಘುನಾಥ್ ಪೂಜಾರಿ ಸಹಿತ ಹಲವರು ಸ್ವಚ್ಚತಾ ಕಾರ್ಯದಲ್ಲಿ ಪಾಲ್ಗೊಂಡರು.

ಭಕ್ತರ ಸಹಕಾರ ಖುಶಿ ತಂದಿದೆ. ಶ್ರೀ ಕ್ಷೇತ್ರದ ಅಭಿವೃದ್ಧಿಯು ಇಲ್ಲಿವರೆಗೆ ಭಕ್ತರ ಸಹಕಾರದಿಂದ ಇಲ್ಲಿಯವರೆಗೆ ನಡೆಯುತ್ತಾ ಬಂದಿದೆ. ಹಿಂದಿನ ನಮ್ಮ ಅವಧಿಯಲ್ಲೂ ಶ್ರೀ ಕ್ಷೇತ್ರ ಭಕ್ತರ ಸಹಕಾರದಿಂದ ಅಭಿವೃದ್ಧಿ ಹೊಂದಿದೆ. ಮುಂದಿನ ದಿನಗಳಲ್ಲಿ ನಡೆಯುವ ಶ್ರೀ ಕ್ಷೇತ್ರದ ಷಷ್ಠಿ ಮಹೋತ್ಸವಕ್ಕೆ ಸಂಬಂಧಪಟ್ಟ ಎಲ್ಲಾ ಧಾರ್ಮಿಕ ಕಾರ್ಯಕ್ರಮ ಯಶಸ್ವಿಯಾಗುವತ್ತ ಭಕ್ತರ ಸಹಕಾರವಿರಲಿ.
-ಕೇಶವ ಪೂಜಾರಿ ಬೆದ್ರಾಳ,
ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ, ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ, ಶ್ರೀ ಮಹಾವಿಷ್ಣು ದೇವಸ್ಥಾನ

LEAVE A REPLY

Please enter your comment!
Please enter your name here