ಪುಣಚ: ಕೋಟಿ ಚೆನ್ನಯ ಬಿಲ್ಲವ ಸಂಘ ಪುಣಚ ಇವರ ವತಿಯಿಂದ ಡಿ.೭ರಂದು ನಡೆಯಲಿರುವ ಗುರುಪೂಜೆ ಕಾರ್ಯಕ್ರಮದ ಪ್ರಯುಕ್ತ ಸ್ವಜಾತಿ ಬಾಂಧವರ ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮ ನ.೧೬ರಂದು ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಎದುರು ಗದ್ದೆಯಲ್ಲಿ ನಡೆಯಿತು.

ಬೆಳಿಗ್ಗೆ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ದೇವಕಿ ಪಾದೆಕಟ್ಟ,ದಲ್ಕಾಜೆಗುತ್ತು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ನಮ್ಮಲ್ಲರ ಪ್ರೀತಿ ವಾತ್ಸಲ್ಯದಿಂದ ಸಂಘ ಇನ್ನಷ್ಟು ಉತ್ತರೋತ್ತರ ಅಭಿವೃದ್ಧಿಯಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು. ಸಂಘದ ನಿಕಟಪೂರ್ವ ಪ್ರ.ಕಾರ್ಯದರ್ಶಿ ರವೀಂದ್ರ ಪೂಜಾರಿ ದಲ್ಕಾಜೆ ಮಾತನಾಡಿ ಶುಭ ಹಾರೈಸಿದರು, ದೈಹಿಕ ಶಿಕ್ಷಕ ಪ್ರಕಾಶ್ ತೊಂಡನಡ್ಕ, ಬಿಲ್ಲವ ಮಹಿಳಾ ಘಟಕದ ಅಧ್ಯಕ್ಷೆ ಭವ್ಯ ಮೋಹನ ಹಿತ್ತಿಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘದ ಸದಸ್ಯರಾದ ನಳಿನಿ ಚಂದ್ರಶೇಖರ, ಸಿವಂತಿ ಹಿತ್ತಿಲು, ಚಂದ್ರಶೇಖರ ಮಲ್ಲಿಕಟ್ಟೆ, ಜಗದೀಶ ಪಾದೆಕಟ್ಟ ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ರಿದ್ವಿತ ಪ್ರಾರ್ಥಿಸಿದರು. ಸಂಘದ ಅಧ್ಯಕ್ಷ ರಮೇಶ್ ಕೋಡಂದೂರು ಸ್ವಾಗತಿಸಿ, ಸೌಮ್ಯ.ಕೆ ವಂದಿಸಿದರು. ಜಗನ್ನಾಥ ಎಸ್ ಕಾರ್ಯಕ್ರಮ ನಿರೂಪಿಸಿದರು. ಪುಣಚ ಗ್ರಾ.ಪಂ.ಸದಸ್ಯ ಹರೀಶ್ ಪೂಜಾರಿ ದಲ್ಕಾಜೆ ತೆಂಗಿನಕಾಯಿ ಒಡೆದು ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಬಳಿಕ ಪುಣಚ, ಕೇಪು, ಬಲ್ನಾಡು, ವಿಟ್ಲ ಮುಡ್ನೂರು ಗ್ರಾಮದ ಬಿಲ್ಲವ ಸ್ವಜಾತಿ ಬಾಂಧವರ ಅಂಗನವಾಡಿ, ಶಾಲಾ ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ವಿವಿಧ ಸ್ಪರ್ಧೆಗಳು ಆರಂಭಗೊಂಡಿತು.