ಪುತ್ತೂರು: ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ನಿವೃತ್ತ ಮೇಲ್ವಿಚಾರಕಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಕುಮಾರ್ ಕೆ ಕಬಕ ರವರ ಪತ್ನಿ ವಿಜಯಲಕ್ಷ್ಮಿ ಆರ್ ಬಿ(65ವ) ರವರು ನ.12ರಂದು ಹೃದಯಾಘಾತದಿಂದ ನಿಧನರಾದರು.
ಮೃತರು ಪುತ್ರರಾದ ಡಾ. ಶಿವಪ್ರಸಾದ್ ಕೆ.ವಿ, ಶರತ್ ಕೆ.ವಿ, ಭರತ್ ಕೆ.ವಿ, ಸೊಸೆಯಂದಿರಾದ ಮಮತಾ,ರಚನಾ, ಶ್ವೇತಾ, ಮೊಮ್ಮಕ್ಕಳಾದ ನಿಹಾಲ್ ಪ್ರಸಾದ್, ಸ್ಮಯನ್ ವಿದಾರ್ಥ್, ಚಾರ್ವಿಕ್ ಕೆ, ತಾಯಿ ಭಾಗೀರಥಿ, ತಮ್ಮ ಜೀವನ್ ಆರ್.ಬಿ, ತಂಗಿ ಜಯಶ್ರೀ ಆರ್ ಬಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
