ಪುತ್ತೂರು: ಆಕಾಂಕ್ಷ ಚಾರಿಟೇಬಲ್ ವತಿಯಿಂದ ರಾಮಕೃಷ್ಣ ಪ್ರೌಢಶಾಲೆ, ಕೊಂಬೆಟ್ಟು ಇಲ್ಲಿ ನಡೆಸಲ್ಪಟ್ಟ ಕೋಡ್ ಕ್ರಾಪ್ಟ್ ವಿಜ್ಞಾನ ಮೇಳದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಪ್ರಾಥಮಿಕ ವಿಭಾಗದಲ್ಲಿ ಅಭಿನವ್-ಪ್ರಥಮ ಸ್ಥಾನ ಪಡೆದು 7000 ನಗದು ಬಹುಮಾನ ಪಡೆದಿರುತ್ತಾರೆ.
ಪ್ರೌಢ ವಿಭಾಗದಲ್ಲಿ ವೈಭವ್ ಮತ್ತು ಯಶಸ್ ತೃತೀಯ ಸ್ಥಾನ ಪಡೆದು 3000 ನಗದು ಬಹುಮಾನ ಪಡೆದಿರುತ್ತಾನೆ. ಕೌಶಿಕ್ ಸಮಾಧಾನಕರ ಬಹುಮಾನದೊಂದಿಗೆ 1000 ನಗದು ಬಹುಮಾನ ಪಡೆದಿರುತ್ತಾರೆ. ಮತ್ತು ಈ ಮೂರು ವಿದ್ಯಾರ್ಥಿಗಳು ಮಂಗಳೂರಿನ ಕೋಡ್ ಕ್ರಾಪ್ಟ್ ಟೆಕ್ನಾಲಜಿ ಸಂಸ್ಥೆಗೆ ಭೇಟಿ ನೀಡುವ ಅವಕಾಶ ಪಡೆದುಕೊಂಡಿದ್ದಾರೆ.
