ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿಜಯಕುಮಾರ್ ಸೊರಕೆರವರಿಗೆ ದೈಪಿಲ ದೀಪಾವಳಿ ಕ್ರೀಡೋತ್ಸವ ಸಮಿತಿಯಿಂದ ಸನ್ಮಾನ

0

ಪುತ್ತೂರು; ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ವಿಜಯಕುಮಾರ್ ಸೊರಕೆರವರ ಚಾರ್ವಾಕ ಕುಮಾರಧಾರ ಫಾರ್ಮ್ಸ್ ಗೆ ಭೇಟಿ ನೀಡಿದ ದೈಪಿಲ ದೀಪಾವಳಿ ಕ್ರೀಡೋತ್ಸವ ಸಮಿತಿ, ಪರ್ಬದ ಗೊಬ್ಬು ಇದರ ಅಧ್ಯಕ್ಷರು, ಪದಾಧಿಕಾರಿಗಳು ವಿಜಯಕುಮಾರ್ ಸೊರಕೆರವರನ್ನು ಶಾಲು ಹೊದಿಸಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ದೀಪಾವಳಿ ಕ್ರೀಡೋತ್ಸವ ಸಮಿತಿ ದೈಪಿಲ ಇದರ ಅಧ್ಯಕ್ಷ ವಿನಯ್ ಉಳವ, ಉಪಾಧ್ಯಕ್ಷ ಸುಂದರ ದೇವಸ್ಯ, ಕಾರ್ಯದರ್ಶಿ ಮಹೇಶ್ ಖಂಡಿಗ, ಗೌರವ ಸಲಹೆಗಾರರಾದ ಆನಂದ ಕೊಪ್ಪ, ಸಚಿನ್ ದೈಪಿಲ, ರಾಘವೇಂದ್ರ ಗೌಡ ದೈಪಿಲ, ಕ್ರೀಡಾ ಕಾರ್ಯದರ್ಶಿ ಸಂತೋಷ್ ಕೊಪ್ಪ, ಚಿನ್ಮಯಿ ವಜ್ರಡ್ಕ ಹಾಗೂ ಸದಸ್ಯರಾದ ನವೀನ್ ಕಂಡಿಗ, ಅಶ್ವಥ್ ಕಂಡಿಗ, ಜಗತ್ ಕಜೆ, ವಸಂತ ವಜ್ರಡ್ಕ, ಜಯಾನಂದ ಕೊಪ್ಪ, ಗಣೇಶ್ ದೇವಸ್ಯ, ವಿಶ್ವನಾಥ ಕಂಡಿಗ, ದಿವಾಕರ ಕಂಡಿಗ, ಅಶ್ವಥ್ ಕಂಡಿಗ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here