ಪುತ್ತೂರು: ಜನವರಿ 9ರಿಂದ 15ರ ವರೆಗೆ ನಡೆಯುವ ಈಶ್ವರಮಂಗಲ ಮಖಾಂ ಉರೂಸ್ ಪ್ರಚಾರಾರ್ಥ ಪೂರ್ವಭಾವಿ ಸಭೆ ಎನ್ಪಿಎಂ ಜಲಾಲುದ್ದೀನ್ ತಂಙಳ್ ಅಲ್ ಬುಖಾರಿ ಅವರ ನೇತೃತ್ವದಲ್ಲಿ ನಡೆಯಿತು.

ಉರೂಸ್ ಕಮಿಟಿ ಗೌರವಾಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಮೇನಾಲ, ಜಮಾಅತ್ ಕಮಿಟಿ ಉಪಾಧ್ಯಕ್ಷ ಇ.ಪಿ ಮುಹಮ್ಮದ್ ಕುಂಞಿ ಹಾಜಿ, ಉರೂಸ್ ಕಮಿಟಿ ಅಧ್ಯಕ್ಷ ತ್ವಾಹ ಪಿ.ಎಸ್, ಜಮಾಅತ್ ಕಾರ್ಯದರ್ಶಿಗಳಾದ ಖಾದರ್ ಹಾಜಿ ಇ.ಎಸ್, ರಹ್ಮಾನ್ ಮೇನಾಲ, ಸಲಾಂ ಎಂ.ಎ ಖಜಾಂಜಿ ಇ.ಎ ಮುಹಮ್ಮದ್ ಕುಂಞಿ ಜಮಾಅತ್ ಉಪಾಧ್ಯಕ್ಷ ಹಾರಿಸ್ ಪಿ.ಎಸ್, ಉರೂಸ್ ಕಮಿಟಿ ಉಪಾಧ್ಯಕ್ಷ ಮುಸ್ತಫಾ ಮಿನಿ, ಸವಾದ್ ಯು.ಎಂ, ಉರೂಸ್ ಕಮಿಟಿ ಪ್ರಧಾನ ಕಾರ್ಯದರ್ಶಿ ಅಬ್ಬು ಎ.ಎಚ್, ಕಾರ್ಯದರ್ಶಿ ಶಿಹಾಬ್ ಬಿ.ಸಿ, ಉರೂಸ್ ಕಮಿಟಿ ಖಜಾಂಜಿ ಮುಹಮ್ಮದ್ ಟಿ.ಎ, ಹಾಗೂ ಜಮಾಅತರು ಉಪಸ್ಥಿತರಿದ್ದರು.