ನೃತ್ಯಾಂತರಂಗದಲ್ಲಿ ಡಾ.ಮಹಿಮಾರವರ ಮನಮೋಹಕ ಭರತನಾಟ್ಯ

0

ಪುತ್ತೂರು : ಪುತ್ತೂರಿನ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಸರಣಿ ನೃತ್ಯ ಕಾರ್ಯಕ್ರಮ ನೃತ್ಯಾಂತರಂಗದ 138ನೇ ಸರಣಿಯಲ್ಲಿ ಗುರು ವಿದುಷಿ ವಿದ್ಯಾ ಮನೋಜ್ ರವರ ಶಿಷ್ಯೆ ಹಾಗೂ ಪುತ್ರಿ ಬಾ. ಮಹಿಮಾ ಎಂ. ಪಣಿಕ್ಕರ್ ರವರು ಭರತನಾಟ್ಯ ಕಾರ್ಯಕ್ರಮ ನಡೆಸಿಕೊಟ್ಟರು.

ಪುಷ್ಪಾಂಜಲಿ, ನೀಲಿ ಪದಂ, ಕೃಷ್ಣನ ಲಾಲಿ ಪದ, ಜಾವಳಿ ಮತ್ತು ಅಭಂಗ್ ಹೀಗೆ ವಿವಿಧ ರೀತಿಯ ನೃತ್ಯಬಂಧಗಳನ್ನು ಪ್ರಸ್ತುತಪಡಿಸಿದರು. ಅಭ್ಯಾಗತರಾದ ಫಿಲೋಮಿನಾ ಕಾಲೇಜಿನ ನಿವೃತ್ತ ಉಪನ್ಯಾಸಕರಾದ ಪ್ರೊ. ಸಂಪತ್ತಿಲ ಈಶ್ವರ ಭಟ್ ರವರು ಮೂಕಾಂಬಿಕಾ ಸಂಸ್ಥೆಯ ಕಾರ್ಯವೈಖರಿ ಹಾಗೂ ಕಲಾವಿದೆ ಡಾ. ಮಹಿಮಾ ರವರ ಸಾಧನೆಯನ್ನು ಶ್ಲಾಘಿಸಿದರು.

ಕಾರ್ಯಕ್ರಮದ ನಿರೂಪಣೆಯನ್ನು ಭಾನವಿ ಕೃಷ್ಣ, ಶಂಖನಾದ – ವಿ. ಗಿರೀಶ್ ಕುಮಾರ್, ಓಂಕಾರನಾದ – ವಿ. ಪ್ರೀತಿಕಲಾ, ಪ್ರಾರ್ಥನೆ – ಸನ್ನಿಧಿ, ಪಂಚಾಂಗ ವಾಚನ – ಮಾತಂಗಿ, ಪರಿಚಯ – ದೀಕ್ಷಾ ಮತ್ತು ಉತ್ಸವಿ, ವಿಷಯ ಮಂಡನೆ – ವಿ. ವಸುಧಾ ಪ್ರಸ್ತುತಿಗೈದರು. ವಿದ್ವಾನ್ ದೀಪಕ್ ಕುಮಾರ್ ಕಾರ್ಯಕ್ರಮವನ್ನು ವ್ಯವಸ್ಥೆಗೊಳಿಸಿದ್ದರು. ವಿ. ವಿದ್ಯಾ ಮನೋಜ್ ಕೃತಜ್ಞತೆ ಸಲ್ಲಿಸಿದರು.

LEAVE A REPLY

Please enter your comment!
Please enter your name here