ಪುತ್ತೂರು ಭಾರತೀಯ ಜೀವ ವಿಮಾ ನಿಗಮದ ಕಛೇರಿ ಬಳಿಯಿರುವ ಶ್ರೀ ಭವಾನಿಶಂಕರ ದೇವಸ್ಥಾನಕ್ಕೆ 118 ವರ್ಷಗಳಾಗಿವೆ. ಬೆಳ್ಳಪ್ಪಾಡಿ ರಾಮಚಂದ್ರಯ್ಯನವರ ಪುತ್ರ ಬೆಳ್ಳಪ್ಪಾಡಿ ಭವಾನಿಶಂಕರರಿಂದ ೧೮೯೬ರಲ್ಲಿ ಈ ದೇವಸ್ಥಾನವು ಸ್ಥಾಪನೆಗೊಂಡಿತು. ಇಲ್ಲಿ ಕಾರ್ತಿಕ ಹುಣ್ಣಿಮೆ, ಮಹಾ ಶಿವರಾತ್ರಿ ಹಾಗೂ ಪ್ರತಿಷ್ಠಾ ವರ್ಧಂತಿ ಉತ್ಸವಗಳು ನಡೆಯುತ್ತಿವೆ. ಪುತ್ತೂರಿನ ಚಿತ್ರಾಪುರ ಸಾರಸ್ವತ ಸಮಾಜ ಪ್ರಸ್ತುತ ದೇವಸ್ಥಾನದ ಆಡಳಿತವನ್ನು ನಡೆಸುತ್ತಿದೆ. ಆಡಳಿತ ಮಂಡಳಿಯಲ್ಲಿ ಪಾಂಗಾಳ ರಮೇಶ್ ರಾವ್ ಅಧ್ಯಕ್ಷರಾಗಿ ದಿನೇಶ್ ಪಾಂಗಾಳ ಕಾರ್ಯದರ್ಶಿಯಾಗಿ ಮತ್ತು ಜಯಂತ ಬೆಳ್ಳಾರೆ, ಕರ್ವೆ ಗಿರಿಧರ ರಾವ್ ಹಾಗೂ ಅರುಣ ಉಳ್ಳಾಲ್ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
Home ಭವಾನಿಶಂಕರ ದೇವಸ್ಥಾನ, ಪುತ್ತೂರು, ಫೋನ್: 08251-231637, 9481960637