ಪುತ್ತೂರು : ಉಪ್ಪಿನಂಗಡಿ ವಲಯದ ಬೆಳ್ಳಿಪಾಡಿ ಒಕ್ಕಲಿಗ ಸ್ವಸಹಾಯ ಒಕ್ಕೂಟದ ಶ್ರೀಲಕ್ಷ್ಮಿ ಸಂಘದ ಸದಸ್ಯೆ ದಾಜಮ್ಮ ರವರ ವೈದ್ಯಕೀಯ ಚಿಕಿತ್ಸೆಗಾಗಿ ಪುತ್ತೂರು ಒಕ್ಕಲಿಗ ಸ್ವಸಹಾಯ ಟ್ರಸ್ಟ್ನಿಂದ ಧನಸಹಾಯ ಚೆಕ್ ವಿತರಿಸಲಾಯಿತು. ಬೆಳ್ಳಿ ಪಾಡಿ ಒಕ್ಕೂಟದ ಅಧ್ಯಕ್ಷ ಕೊರಗಪ್ಪ ಗೌಡರವರು ಧನಸಹಾಯ ಚೆಕ್ ವಿತರಿಸಿದರು. ಟ್ರಸ್ಟ್ನ ಅಧ್ಯಕ್ಷ ಡಿ.ವಿ ಮನೋಹರ್, ಸ್ವಸಹಾಯ ಸಂಘದ ಕಾರ್ಯದರ್ಶಿ ಜಲಜಾಕ್ಷಿ, ಕೋಶಾಧಿಕಾರಿ ಗಿರಿಜಾ, ಟ್ರಸ್ಟ್ ಮೇಲ್ವಿಚಾರಕಿ ಸುಮಲತಾ, ಪ್ರೇರಕ ತಾರಾನಾಥ್ ಉಪಸ್ಥಿತರಿದ್ದರು.