ಇಚ್ಲಂಪಾಡಿ: 10ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

0

ನೆಲ್ಯಾಡಿ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇಚ್ಲಂಪಾಡಿ ಮತ್ತು ಇಚ್ಲಂಪಾಡಿ ನೇರ್ಲ ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರದ ಸಹಭಾಗಿತ್ವದಲ್ಲಿ ೧೦ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಆ.೩೦ ಮತ್ತು ೩೧ರಂದು ಇಚ್ಲಂಪಾಡಿ ನೇರ್ಲ ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರದಲ್ಲಿ ನಡೆಯಿತು.
ಇಚ್ಲಂಪಾಡಿ ಬೀಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾದ ಹರೀಶ್ ಭಟ್‌ರವರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮ ನಡೆಯಿತು. ಆ.೩೦ರಂದು ಸಂಜೆ ಶ್ರೀ ಗಣಪತಿ ದೇವರ ವಿಗ್ರಹವನ್ನು ಭಜನಾ ಮಂದಿರಕ್ಕೆ ತರಲಾಯಿತು. ಗೌರಿ ಹಬ್ಬದ ಪ್ರಯುಕ್ತ ಸಂಜೆ ವಿವಿಧ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಿತು. ರಾತ್ರಿ ನೇರ್ಲ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಅನ್ನಸಂತರ್ಪಣೆ ನಡೆಯಿತು. ಬಳಿಕ ವಿಠಲ ನಾಯಕ್ ಕಲ್ಲಡ್ಕ ಮತ್ತು ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ ನಡೆಯಿತು. ಆ.೩೧ರಂದು ಬೆಳಿಗ್ಗೆ ದೇವತಾ ಪ್ರಾರ್ಥನೆ, ಪುಣ್ಯಾಹ ವಾಚನ, ಗಣಹೋಮ ನಡೆದು ೭.೩೨ರ ಸಿಂಹ ಲಗ್ನದಲ್ಲಿ ಶ್ರೀ ಗಣಪತಿ ದೇವರ ವಿಗ್ರಹ ಪ್ರತಿಷ್ಠೆ ಮಾಡಲಾಯಿತು. ನಂತರ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಿತು. 
ಧಾರ್ಮಿಕ ಸಭೆ:
ಪೂರ್ವಾಹ್ನ ನಡೆದ ಧಾರ್ಮಿಕ ಸಭೆಯಲ್ಲಿ ಶ್ರೀದಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಆಶೀರ್ವಚನ ನೀಡಿ, ಮೂಡನಂಬಿಕೆ ಬಿಟ್ಟು ಮೂಲನಂಬಿಕೆ ಉಳಿಸಿಕೊಳ್ಳಬೇಕು. ಗ್ರಾಮ,ಸೀಮೆ,ಕುಟುಂಬದ ದೈವ, ದೇವರ ಮೇಲೆ ನಂಬಿಕೆ ಇರಬೇಕು. ಗುರು ಹಿರಿಯ ಆಶೀರ್ವಾದ ಪಡೆಯಬೇಕು. ಇಲ್ಲಿನ ಸಂಸ್ಕೃತಿಯ ಪಾವಿತ್ರ್ಯತೆ ಉಳಿಸಿಕೊಳ್ಳಬೇಕೆಂದು ಹೇಳಿದ ಅವರು, ಮಕ್ಕಳು, ಮಹಿಳೆಯರು ವಾರದ ಭಜನೆಯಲ್ಲಿ ನಿರಂತರ ಪಾಲ್ಗೊಳ್ಳಬೇಕು. ಸಿದ್ಧಿವಿನಾಯಕ ಭಜನಾ ಮಂದಿರಕ್ಕೆ ಸಹಕಾರ ನೀಡುವುದಾಗಿ ಹೇಳಿದರು. ಗಣೇಶೋತ್ಸವ ಸಮಿತಿ ಅಧ್ಯಕ್ಷ ಭಾಸ್ಕರ ಎಸ್.ಗೌಡ ಅಧ್ಯಕ್ಷತೆ ವಹಿಸಿ ಸಂದರ್ಭೋಚಿತವಾಗಿ ಮಾತನಾಡಿದರು. ಇಚ್ಲಂಪಾಡಿ ಬೀಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶುಭಾಕರ ಹೆಗ್ಗಡೆ, ಶ್ರೀ ಕ್ಷೇ.ಧ.ಗ್ರಾ.ಯೋ. ಇಚ್ಲಂಪಾಡಿ ಒಕ್ಕೂಟದ ಅಧ್ಯಕ್ಷ ಅನಿಲ್‌ಕುಮಾರ್ ಕಟ್ಟತ್ತಂಡ, ಇಚ್ಲಂಪಾಡಿ-ಬೀಡು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಅಧ್ಯಕ್ಷ ಜಾಣಪ್ಪ ಪೂಜಾರಿ ಶುಭಹಾರೈಸಿದರು. ಇಚ್ಲಂಪಾಡಿ ಕೆಡೆಂಬೇಲು ಮಂಜುಶ್ರೀ ಭಜನಾ ಮಂಡಳಿ ಅಧ್ಯಕ್ಷ ತನಿಯಪ್ಪ ಮೊಂಟೆತ್ತಡ್ಕ, ಇಚ್ಲಂಪಾಡಿ ಶಂಖದ್ವೀಪ ಗೌರಿಶಂಕರ ಭಜನಾ ಮಂಡಳಿ ಅಧ್ಯಕ್ಷ ರಾಜಮ್ಮ ಚಂದ್ರಶೇಖರ ನಾಯರ್, ಇಚ್ಲಂಪಾಡಿ ಬೀಡು ಶ್ರೀ ದುರ್ಗಾಪರಮೇಶ್ವರಿ ಮಹಿಳಾ ಭಜನಾ ಮಂಡಳಿ ಅಧ್ಯಕ್ಷೆ ದೇವಕಿ ಕುಡಾಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. 
ಮಾಜಿ ಅಧ್ಯಕ್ಷ/ ಕಾರ್ಯದರ್ಶಿಗಳಿಗೆ ಗೌರವಾರ್ಪಣೆ:
ಶ್ರೀ ಸಿದ್ಧಿವಿನಾಯಕ ಭಜನಾಮಂದಿರದ ಅಧ್ಯಕ್ಷರಾಗಿ ಈ ಹಿಂದೆ ಸೇವೆ ಸಲ್ಲಿಸಿದ ರವೀಂದ್ರ ಬಿಜೇರು, ರಾಧಾಕೃಷ್ಣ ಕೆರ್ನಡ್ಕ, ಪೂವಪ್ಪ ಗೌಡ ಪುಳಿತ್ತಡಿ, ಅನಿಲ್‌ಕುಮಾರ್ ಉಮೆಸಾಗು, ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದ ರಾಜಶೇಖರ ನಾಯರ್ ಮಾನಡ್ಕ, ಹರೀಶ್ ಗೌಡ ಅಲೆಕ್ಕಿ, ಶಿವಪ್ಪ ಗೌಡ ಬಿಜೇರು, ಮೋಹನ್ ಕೆರ್ನಡ್ಕ, ಉಮೇಶ್ ಶೆಟ್ಟಿ ಮಾನಡ್ಕ, ದಿನಕರ ಶೆಟ್ಟಿ ಹೊಸಮನೆ, ಗಣೇಶೋತ್ಸವ ಸಮಿತಿಯಲ್ಲಿ ಈ ಹಿಂದೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಹರೀಶ್ ಗೌಡ ನೇರ್ಲ, ರವೀಂದ್ರ ಬಿಜೇರು, ಪೂವಪ್ಪ ಗೌಡ ಪುಳಿತ್ತಡಿ, ಉದಯಕುಮಾರ್ ಹೊಸಮನೆ, ಕೇಶವ ಗೌಡ ಅಲೆಕ್ಕಿ, ಬಾಲಕೃಷ್ಣ ಎಸ್.ಕೆ.ಕುಡಾಲ, ಶ್ರೀನಿವಾಸ ಪೂಜಾರಿ ನಿಡ್ಯಡ್ಕ, ಗಿರೀಶ್ ಸಾಲಿಯಾನ್ ಬದನೆ, ಶಾಂತರಾಮ ಕುಡಾಲ, ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದ ಶಶಿಧರ ಪೊಯ್ಯೆತ್ತಡ್ಡ, ಸದಾನಂದ ಶೆಟ್ಟಿ ಗುತ್ತಿನಮನೆ, ಅಕ್ಷತ್ ಶೆಟ್ಟಿ ನೇರ್ಲ, ದಿನೇಶ್ ಪೂಜಾರಿ ಬರಮೇಲು, ಪ್ರಶಾಂತ ಪೂಜಾರಿ ಬರಮೇಲು, ಚೆನ್ನಪ್ಪ ಪರವ ಬಿಜೇರು, ಶ್ರೀಧರ ಎನ್.ಬಿಜೇರು, ಅಕ್ಷಯ್ ಗೌಡ ನೇರ್ಲ, ಲೋಹಿತ್ ಬಿಜೇರು ಅವರಿಗೆ ಸ್ವಾಮೀಜಿ ಶಾಲು ಹಾಕಿ, ಸ್ಮರಣಿಕೆ ನೀಡಿ ಗೌರವಿಸಿದರು. 
ದಾನಿಗಳಿಗೆ ಗೌರವಾರ್ಪಣೆ:
ಸತತ ೧೦ ವರ್ಷಗಳಿಂದ ಗಣಪತಿ ವಿಗ್ರಹದ ದಾನಿಯಾಗಿರುವ ಭೂಸೇನೆ ಸೈನಿಕರಾದ ಸಂತೋಷ್ ಗೌಡ ನೇರ್ಲ, ಶೋಭಾಯಾತ್ರೆಗೆ ಟ್ರ್ಯಾಕ್ಟರ್ ದಾನಿಗಳಾದ ಭಾಸ್ಕರ ಗೌಡ ಪದಕ, ಭಜನಾ ತಂಡದ ಮಕ್ಕಳಿಗೆ ಸಮವಸ್ತ್ರ ನೀಡಿದ ಲೋಕೇಶ್ ಶೆಟ್ಟಿ ನೇರ್ಲ, ಭಜನಾ ಮಂದಿರಕ್ಕೆ ಧ್ವನಿವರ್ಧಕ ದಾನಿ ಜಯನ್ ನೀತಿ, ಶೋಭಾಯಾತ್ರೆಯ ವಾಹನದ ಚಾಲಕ ರಾಮಚಂದ್ರ ಪದಕ, ಭಜನಾ ದಿನದಂದು ವಿಶೇಷ ಸೇವೆ ಸಲ್ಲಿಸುತ್ತಿರುವ ಮೋನಪ್ಪ ನಿಡ್ಯಡ್ಕ, ಕಳೆದ ೩ ವರ್ಷ ಕಾರ್ಯಕ್ರಮ ನೀಡಿದ ಇಚ್ಲಂಪಾಡಿ ಸಪ್ತಸ್ವರಂ ಮ್ಯೂಸಿಕ್‌ನ ಉದಯಕುಮಾರ್ ಹೊಸಮನೆ, ಕುಣಿತ ಭಜನಾ ತಂಡದ ಮಕ್ಕಳಿಗೆ ತರಬೇತಿ ನೀಡಿದ ಸಚಿನ್ ನೇರ್ಲ, ಅಕ್ಷಯ್ ನೇರ್ಲರವರಿಗೆ ಶಾಲು ಹಾಕಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ವಾರದ ಭಜನೆಯಲ್ಲಿ ನಿರಂತರ ಪಾಲ್ಗೊಳ್ಳುತ್ತಿರುವ ಮಕ್ಕಳಿಗೆ ಸ್ವಾಮೀಜಿಯವರು ಕೇಸರಿ ಶಾಲು ಹಾಕಿ ಗೌರವಿಸಿದರು. ಗಣೇಶೋತ್ಸವಕ್ಕೆ ವಿವಿಧ ರೀತಿಯಲ್ಲಿ ಸಹಕಾರ ನೀಡಿದ ದಾನಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. 
ರಜತ ಕಿರೀಟ ದಾನಿಗಳಿಗೆ ಗೌರವಾರ್ಪಣೆ:
ದಶಮಾನೋತ್ಸವದ ಪ್ರಯುಕ್ತ ಶ್ರೀ ಮಹಾಗಣಪತಿ ದೇವರಿಗೆ ಸುಮಾರು ೮೦ ಸಾವಿರ ರೂ.ಮೌಲ್ಯದ ರಜತ ಕಿರೀಟ ಸಮರ್ಪಣೆ ಮಾಡಲಾಯಿತು. ಇದಕ್ಕೆ ಸಹಕರಿಸಿದ ದಾನಿಗಳಾದ ಶುಭಾಕರ ಹೆಗ್ಗಡೆ ಇಚ್ಲಂಪಾಡಿ ಬೀಡು, ರಾಧಾಕೃಷ್ಣ ಗೌಡ ಕೆರ್ನಡ್ಕ, ಭಾಸ್ಕರ ಎಸ್.ಗೌಡ ಒಡ್ಯೆತ್ತಡ್ಡ, ಕೇಶವ ಗೌಡ ಅಲೆಕ್ಕಿ, ಸಂತೋಷ್ ಗೌಡ ನೇರ್ಲ, ಪುರುಷೋತ್ತಮ ಧವಳಗಿರಿ, ಸಂಜೀವ ಶೆಟ್ಟಿ ನೇರ್ಲ, ರುಕ್ಮಯ್ಯ ಗೌಡ ಕೊರಮೇರು, ಪೂವಪ್ಪ ಗೌಡ ಪುಳಿತ್ತಡಿ, ನಿವೃತ್ತ ಸೈನಿಕ ಹರೀಶ್ ಪೂಜಾರಿ ಮುಚ್ಚಿಲ, ಸಜಿಕುಮಾರ್ ಎಇಇ ಮೆಸ್ಕಾಂ ಕಡಬ, ಮೆಸ್ಕಾಂ ಪುತ್ತೂರು ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ ಎ., ಮೆಸ್ಕಾಂ ನೆಲ್ಯಾಡಿ ಶಾಖಾ ಕಿರಿಯ ಇಂಜಿನಿಯರ್ ರಮೇಶ್ ಬಿ., ಇಚ್ಲಂಪಾಡಿ ಶ್ರೀ ಕೃಷ್ಣ ಇಲೆಕ್ಟ್ರಿಕಲ್ಸ್‌ನ ಅಭಿಲಾಷ್ ಪಿ.ಕೆ., ಇಚ್ಲಂಪಾಡಿ ಬ್ರೈಟ್ ಇಲೆಕ್ಟ್ರಿಕಲ್ಸ್‌ನ ಸಜೀವ ಎ.ಜಿ., ಚಂದ್ರಶೇಖರ ಗೌಡ ಕೆರ್ನಡ್ಕರವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು. 
ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರದ ಅಧ್ಯಕ್ಷ ಕೇಶವ ಗೌಡ ಅಲೆಕ್ಕಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಣೇಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಹರೀಶ್ ಶೆಟ್ಟಿ ನೇರ್ಲ ಸ್ವಾಗತಿಸಿದರು. ಶ್ರೀಮತಿ ನಂದಾ ಪಾದೆ ವಂದಿಸಿದರು. ರಾಧಾಕೃಷ್ಣ ಗೌಡ ಕೆರ್ನಡ್ಕ, ರವೀಂದ್ರ ಬಿಜೇರು ಕಾರ್ಯಕ್ರಮ ನಿರೂಪಿಸಿದರು. ಮೇಘಾ, ದಕ್ಷಾ ಹಾಗೂ ಮೋಕ್ಷಿತ ಪ್ರಾರ್ಥಿಸಿದರು. ಸ್ವಾಮೀಜಿಯವರನ್ನು ಇಚ್ಲಂಪಾಡಿ ಜಂಕ್ಷನ್‌ನಿಂದ ಕುಣಿತ ಭಜನೆ ಹಾಗೂ ಸುಮಂಗಲೆಯರ ಪೂರ್ಣಕುಂಭ ಸ್ವಾಗತದೊಂದಿಗೆ ಭಜನಾಮಂದಿರಕ್ಕೆ ಕರೆತರಲಾಯಿತು. ಮಧ್ಯಾಹ್ನ ದೇವರ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಬಳಿಕ ಊರವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಶೋಭಾಯಾತ್ರೆ:
ಸಂಜೆ ೩ ಗಂಟೆಯಿಂದ ಶ್ರೀ ಮಹಾಗಣಪತಿ ದೇವರ ವಿಗ್ರಹದ ಭವ್ಯ ಶೋಭಾಯಾತ್ರೆ ನಡೆಯಿತು. ಭಜನಾ ಮಂದಿರದಿಂದ ಆರಂಭಗೊಂಡ ಶೋಭಾಯಾತ್ರೆ ಕಾಯರ್ತಡ್ಕ ರಾಜನ್‌ದೈವದ ಕಟ್ಟೆಯ ತನಕ ತೆರಳಿ ಅಲ್ಲಿಂದ ಮತ್ತೆ ಇಚ್ಲಂಪಾಡಿಗೆ ಆಗಮಿಸಿ ಕುರಿಯಾಳಕೊಪ್ಪ ಲಕ್ಷ್ಮೀ ಜನಾರ್ದನ ದೇವಸ್ಥಾನದ ಕ್ರಾಸ್ ಬೇರಿಕೆ ತನಕ ಸಾಗಿ ಮತ್ತೆ ಹಿಂತಿರುಗಿ ಶಂಖದ್ವೀಪ ಶ್ರೀ ಗಂಗಾಧರೇಶ್ವರ ದೇವಸ್ಥಾನದ ಪಕ್ಕ ವಿಗ್ರಹದ ಜಲಸ್ತಂಭನ ಮಾಡಲಾಯಿತು. ಶೋಭಾಯಾತ್ರೆಯಲ್ಲಿ ಟೀಮ್ ಎಸ್‌ಆರ್‌ಕೆ ಪುತ್ತೂರು ಇವರಿಂದ ನಾಸಿಕ್ ಬ್ಯಾಂಡ್ ನಡೆಯಿತು. ಇಚ್ಲಂಪಾಡಿ ಬೀಡು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ, ಶ್ರೀ ಸಿದ್ಧಿವಿನಾಯಕ ಭಜನಾ ಮಂಡಳಿ, ಶ್ರೀ ದುರ್ಗಾಪರಮೇಶ್ವರಿ ಮಹಿಳಾ ಭಜನಾ ಮಂಡಳಿ, ಇಚ್ಲಂಪಾಡಿ ಕಡೆಂಬೇಲು ಶ್ರೀ ಮಂಜುಶ್ರೀ ಭಜನಾ ಮಂಡಳಿ, ಕುರಿಯಾಳಕೊಪ್ಪ ಶ್ರೀ ಲಕ್ಷ್ಮೀ ಜನಾರ್ದನ ಭಜನಾ ಮಂಡಳಿ, ಇಚ್ಲಂಪಾಡಿ ಶಂಖದ್ವೀಪ ಶ್ರೀ ಗೌರಿಶಂಕರ ಮಹಿಳಾ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಿತು. 

LEAVE A REPLY

Please enter your comment!
Please enter your name here