ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಲಿತಿನ್ ಶಾಂತಿನಗರ ಪ್ರಥಮ

0

ಪುತ್ತೂರು: ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಶನ್‌ನ ಸಹಸಂಸ್ಥೆಯಾಗಿರುವ ಕಲಾಭೂಮಿ ಮಾರ್ಷಲ್ ಆರ್ಟ್ಸ್ ಅಕಾಡೆಮಿ ಮತ್ತು ಕ್ರೀಡಾ ಭಾರತಿ ಮಂಗಳೂರು ವಿಭಾಗದ ವತಿಯಿಂದ ಮಡಿಕೇರಿಯ ಕುಶಾಲನಗರದ ರೈತಭವನದಲ್ಲಿ ಅ.9ರಂದು ನಡೆದ ರಾಜ್ಯಮಟ್ಟದ ಕರಾಟೆ ಚಾಂಪಿಯನ್‌ಶಿಪ್ ‘ಕೊಡಗು ಕಪ್-2022’ರ 11-12ರ ವಯೋಮಾನದ ಬಾಲಕರ ಕಟಾ ವಿಭಾಗದಲ್ಲಿ ಲಿತಿನ್ ಎಸ್. ಪ್ರಥಮ ಸ್ಥಾನ ಪಡೆದಿದ್ದಾರೆ. ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 6ನೇ ತರಗತಿ ವಿದ್ಯಾರ್ಥಿಯಾಗಿರುವ ಲಿತಿನ್‌ರವರು 34ನೇ ನೆಕ್ಕಿಲಾಡಿ ಗ್ರಾಮದ ಶಾಂತಿನಗರ ನಿವಾಸಿಗಳಾದ ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನದ ಮೊಕ್ತೇಸರ ರಾಜೇಶ್ ಮತ್ತು ಪ್ರಸನ್ನ ಕುಮಾರಿಯವರ ಪುತ್ರ. ಲಿತಿನ್‌ ಅವರು ಇನ್ಸ್‌ಟ್ಯೂಟ್‌ ಆಫ್‌ ಕರಾಟೆ ಮತ್ತು ಮಾರ್ಷಲ್‌ ಆರ್ಟ್‌ ಪುತ್ತೂರು ಶಾಖೆಯ ಶಿಕ್ಷಕ ಶಿವಪ್ರಸಾದ್‌ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.

 

LEAVE A REPLY

Please enter your comment!
Please enter your name here