ಮಂಜುನಾಥ್ ಸುವರ್ಣರ ಪ್ರಾಮಾಣಿಕತೆ: ಬಿದ್ದು ಸಿಕ್ಕಿದ ರೂ. 40 ಸಾವಿರದ ಮೊಬೈಲ್ ವಾರಸುದಾರರಿಗೆ ಹಸ್ತಾಂತರ

0

ಪುತ್ತೂರು: ಪುತ್ತೂರಿನಿಂದ ಉಪ್ಪಿನಂಗಡಿ ಪ್ರಯಾಣಿಸುತ್ತಿದ್ದ ಮಂಜುನಾಥ್ ಸುವರ್ಣರವರಿಗೆ ದಾರಿ ಮಧ್ಯೆ ನೆಕ್ಕಿಲಾಡಿ ಎಂಬಲ್ಲಿ ಬಿದ್ದು ಸಿಕ್ಕಿದ ಸುಮಾರು 40 ಸಾವಿರ ರೂ. ಬೆಲೆಯ ಮೊಬೈಲ್ ಫೋನ್ ಒಂದನ್ನು ಪ್ರಾಮಾಣಿಕವಾಗಿ ಅದರ ವಾರಸುದಾರರಿಗೆ ಹಿಂದಿರುಗಿಸಿದ್ದಾರೆ.

ದಾರಿ ಮಧ್ಯೆ ಬಿದ್ದು ಸಿಕ್ಕ ಮೊಬೈಲ್‌ನ್ನು ಪುತ್ತೂರಿನಲ್ಲಿ ಕಾವು ಹೇಮನಾಥ್ ಶೆಟ್ಟಿ ಅವರ ಮೂಲಕ ವಾರಸುದಾರಾರ ವರ್ಗಿಸ್ ಇಪಿ ಅವರಿಗೆ ಹಿಂದಿರುಗಿಸುವ ಮೂಲಕ ಮಂಜುನಾಥ ಸುವರ್ಣರವರು ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ. ಈ ಮೊಬೈಲ್ ಹಸ್ತಾಂತರ ಸಂದರ್ಭದಲ್ಲಿ ಮಾತನಾಡಿದ ಹೇಮನಾಥ್ ಶೆಟ್ಟಿ ಅವರು ಸಮಾಜದಲ್ಲಿ ಇಂತಹ ಮನೋಭಾವಗಳು ಜಾಸ್ತಿ ಆಗುವ ಮೂಲಕ ಒಳ್ಳೆಯ ಬಾಂಧವ್ಯದ ಜೀವನ ನಡೆಸುವಂತ ಸ್ಥಿತಿ ನಮ್ಮದಾಗಬೇಕು. ಅದೇ ರೀತಿ ಇಂತಹ ಘಟನೆಗಳು ಸಮಾಜಕ್ಕೆ ಹೆಚ್ಚು ಹೆಚ್ಚು ತಿಳಿಸಿದಾಗ ಪ್ರತಿಯೊಬ್ಬರಲ್ಲೂ ಈ ಭಾವನೆಗಳು ತಾನಾಗಿಯೇ ಮೂಡುತ್ತದೆ ಎಂದು ಹೇಳಿ ಮಂಜುನಾಥ ಸುವರ್ಣರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here