ಕುಂಜಾಡಿ ತರವಾಡು ಮನೆಯಲ್ಲಿ ಅನುಜ್ಞಾ ಕಲಶ, ಬಾಲಾಲಯ ಪ್ರತಿಷ್ಠೆ

0

ಪುತ್ತೂರು: ಕಡಬ ತಾಲೂಕಿನ ಪಾಲ್ತಾಡಿ ಗ್ರಾಮದ ಕುಂಜಾಡಿ ತರವಾಡು ಮನೆಯಲ್ಲಿ ದೈವಗಳ ಅನುಜ್ಞಾ ಕಲಶ, ಬಾಲಾಲಯ ಪ್ರತಿಷ್ಠೆ ದ. 10 ರಂದು ನಡೆಯಿತು.

ಉಳ್ಳಾಕುಲು, ಗ್ರಾಮದೈವ ಅಬ್ಬೆಜಲಾಯ, ಧರ್ಮದೈವ ಪಿಲಿಚಾಮುಂಡಿ, ವರ್ಣಾರ ಪಂಜುರ್ಲಿ, ಕಲ್ಲುರ್ಟಿ, ಜಾವತೆ, ಬೊಬ್ಬರ್ಯ, ಗುಳಿಗ ದೈವಗಳಿಗೆ ದೈವಸ್ಥಾನ, ಮಾಡ ಮತ್ತು ಕಟ್ಟೆಗಳ ಜೀರ್ಣೋದ್ಧಾರ ಪ್ರಯುಕ್ತ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ಅನುಜ್ಞಾ ಕಲಶ ನಡೆಸಿ ಬಾಲಾಲಯದಲ್ಲಿ ಪ್ರತಿಷ್ಠಾಪಿಸಲಾಯಿತು. ಈ ಸಂದರ್ಭದಲ್ಲಿ ಕುಂಜಾಡಿ‌ ಕುಟುಂಬಸ್ಥರು, ಬಂಧುಗಳು ಹಾಗೂ ಕುಂಜಾಡಿ ಮತ್ತು ಬಂಬಿಲ ಗ್ರಾಮಸ್ಥರು ಪಾಲ್ಗೊಂಡರು.


LEAVE A REPLY

Please enter your comment!
Please enter your name here