ಕುಂಜಾರು ಮದಗ ಜನಾರ್ದನ ದೇವಸ್ಥಾನದ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಪುತ್ತೂರು: ಪಡ್ನೂರು ಗ್ರಾಮದ ಕುಂಜಾರು ಮದಗ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಜ.7 ರಿಂದ 9ರ ತನಕ ನಡೆಯಲಿರುವ ವರ್ಷಾವಧಿ ಜಾತ್ರೋತ್ಸವ ಹಾಗೂ ಮನ್ಮಹಾರಥೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಯು ಡಿ.11ರಂದು ಬಿಡುಗಡೆಗೊಂಡಿತು.


ದೇವರಿಗೆ ಪ್ರಾರ್ಥನೆ ಸಲ್ಲಿಸಿದ ಬಳಿಕ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹಾರಕರೆ ವೆಂಕಟ್ರಮಣ ಭಟ್, ಸದಸ್ಯರಾದ ಬಾಲಕೃಷ್ಣ ಜೋಯಿಷ, ಮಧುಸೂದನ ಪಡ್ಡಾಯೂರು, ಚೈತ್ರನಾರಾಯಣ ಸೇಡಿಯಾಪು, ಬನ್ನೂರು ಗ್ರಾ.ಪಂ ಸದಸ್ಯರಾದ ರಮಣಿ ಡಿ ಗಾಣಿಗ, ಗಣೇಶ್ ಹೆಗ್ಡೆ, ಗಿರಿಧರ ಪಂಜಿಗುಡ್ಡೆ, ಪಡ್ನೂರು ಜನಾರ್ದನ ಯುವಕ ಮಂಡಲದ ಅಧ್ಯಕ್ಷ ರಾಜೇಶ್ ಆಟಿಕ್ಕು, ಪ್ರಮುಖರಾದ, ಶ್ರೀಧರ ಕುಂಜಾರು, ರಾಧಾಕೃಷ್ಣ ಕುಂಜಾರು, ರಮೇಶ್ ರೆಂಜಾಳ, ಪೂವಪ್ಪ ದೇಂತಡ್ಕ, ಜಗದೀಶ್ ಆಟಿಕ್ಕು, ಅವಿನಾಶ್ ಕಡ್ತಿಮಾರ್, ರಾಜೇಶ್ ಬೇರಿಕೆ, ಯಾಧವ ಬೇರಿಕೆ ಸೇರಿದಂತೆ ಹಲವು ಮಂದಿ ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here