ಅಮೇರಿಕದಲ್ಲಿ ರೈಲು ಡಿಕ್ಕಿಯಾಗಿ ಬನ್ನೂರು ನಿವಾಸಿ ವಿದ್ಯಾರ್ಥಿ ಮೃತ್ಯು

0

ಪುತ್ತೂರು: ಅಮೇರಿಕದ ಐಯೋವಾದಲ್ಲಿ ರೈಲು ಅಪಘಾತಕ್ಕೀಡಾಗಿ ಪುತ್ತೂರು ಬನ್ನೂರು ನಿವಾಸಿ ವಿದ್ಯಾರ್ಥಿ ದಾರುಣವಾಗಿ ಮೃತಪಟ್ಟ ಘಟನೆ ಡಿ.9ರಂದು ನಡೆದ ಬಗ್ಗೆ ವರದಿಯಾಗಿದೆ.


ಬನ್ನೂರು ನಿವಾಸಿ ಮೈಸೂರಿನಲ್ಲಿ ಹಿರಿಯ ಹೊಟೇಲ್ ಉದ್ಯಮಿಯಾಗಿದ್ದ ಅನಂತಕೃಷ್ಣ ರಾವ್ ಎಂಬವರ ಪುತ್ರ ಟಿ.ಎ ಸುಬ್ರಹ್ಮಣ್ಯ ಪಡ್ಡಿಲ್ಲಾಯ(30ವ)ರವರು ಮೃತಪಟ್ಟ ವಿದ್ಯಾರ್ಥಿ.
ಅವರು ಮದ್ರಾಸ್ ಐಐಟಿ ವಿದ್ಯಾರ್ಥಿಯಾಗಿದ್ದು, ಅಮೇರಿಕದಲ್ಲಿ ಕಳೆದ ಎರಡು ವರ್ಷಗಳಿಂದ ಉನ್ನತ ವ್ಯಾಸಾಂಗ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಡಿ.9ರಂದು ಅವರಿಗೆ ರೈಲು ಡಿಕ್ಕಿಯಾಗಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಮೃತರು ತಂದೆ ಅನಂತಕೃಷ್ಣ ರಾವ್ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here