ಖೋಖೋ ಪಂದ್ಯಾಟದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಕಡಬದ ನಿತಿನ್ ಕುಮಾರ್‌ರಿಗೆ ಕಡಬ ಠಾಣೆಯಲ್ಲಿ ಸನ್ಮಾನ

0

ಕಡಬ: ಖೋಖೋ ಪಂದ್ಯಾಟದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಕೋಡಿಂಬಾಳ ಗ್ರಾಮದ ಮೂರಾಜೆಯ ಅಡಿಲು ನಿವಾಸಿ ನಿತಿನ್ ಕುಮಾರ್ ಅವರನ್ನು ಕಡಬ ಠಾಣೆಯಲ್ಲಿ ಸನ್ಮಾನಿಸಲಾಯಿತು.

ಕಡಬ ಎಸ್.ಐ. ಆಂಜನೇಯ ರೆಡ್ಡಿಯವರು ನಿತಿನ್ ಕುಮಾರ್ ಅವರನ್ನು ಸನ್ಮಾನಿಸಿ, ಬಳಿಕ ಮಾತನಾಡಿ ಪೋಲಿಸರು ತಪ್ಪು ಮಾಡಿದವರನ್ನು ಶಿಕ್ಷಿಸಲು ಮಾತ್ರ ಇರುವವರಲ್ಲ, ಉತ್ತಮ ಸಾಧನೆ ಮಾಡಿದವರನ್ನು ಗುರುತಿಸುವುದು ನಮ್ಮ ಕರ್ತವ್ಯ, ಯಾವುದೇ ಪ್ರತಿಭೆಗಳನ್ನು ನಾವು ಪ್ರೋತ್ಸಾಹಿಸಿದಾಗ ಅವರಿಗೆ ಇನ್ನಷ್ಟು ಸಾಧನೆ ಮಾಡಲು ಪ್ರೇರಣೆ ನೀಡಿದಂತಾಗುತ್ತದೆ. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಸರಕಾರ ಕೂಡ ಸೌಲಭ್ಯ ಒದಗಿಸುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದ ನಿತಿನ್ ಕುಮಾರ್ ಅವರು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವುದು ಅವರ ವಿಶೇಷ ಸಾಧನೆಯೇ ಸರಿ. ಅವರು ಇನ್ನಷ್ಟು ಸಾಧನೆ ಮಾಡಲೆಂದು ನಾವು ಅವರನ್ನು ಗೌರವಿಸುತ್ತಿದ್ದೇವೆ ಎಂದು ಹೇಳಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ನಿತಿನ್ ಕುಮಾರ್ ಅವರ ತಂದೆ ರಮೇಶ್ ಅಡಿಲು, ತಾಯಿ ವೇದಾವತಿ, ಪ್ರಮುಖರಾದ ಕೃಷ್ಣಪ್ಪ ಕುತ್ಯಾಡಿ ಹಾಗೂ ಠಾಣಾ ಪೋಲಿಸರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here