ದ.19: ಸಾಲ್ಮರ ಸೈಯದ್‌ಮಲೆಗೆ ಹಾಫಿಲ್ ಸಿರಾಜುದ್ದಿನ್ ಖಾಸಿಮಿ

0

ಪುತ್ತೂರು: ಸಾಲ್ಮರ ಸೈಯದ್‌ಮಲೆ ಜುಮ್ಮಾ ಮಸೀದಿಯ ವಠಾರದಲ್ಲಿ ದ.19 ರಂದು ಅಂತಾರಾಷ್ಟ್ರೀಯ ಖ್ಯಾತಿಯ ವಾಗ್ಮಿ ಖ್ಯಾತ ಖುರ್‌ಆನ್ ಪ್ರಭಾಷಕ ಹಾಫಿಲ್ ಸಿರಾಜುದ್ದೀನ್ ಖಾಸಿಮಿ ಅವರ ಏಕದಿನ ಮತ ಪ್ರಭಾಷಣ ನಡೆಯಲಿದೆ ಎಂದು ಮಸೀದಿ ಸಮಿತಿ ಆಧ್ಯಕ್ಷ ನೋಟರಿ ನ್ಯಾಯವಾದಿ ನೂರುದ್ದೀನ್ ಸಾಲ್ಮರ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ಸೆಯ್ಯದ್‌ಮಲೆ ಜುಮ್ಮಾ ಮಸೀದಿಯ ನವೀಕರಣ ಕಾಮಗಾರಿ ನಡೆಯುತ್ತಿದ್ದು, ಈ ಕಾರ್ಯಕ್ಕೆ ದಾನಿಗಳ ಸಹಾಯ ಯಾಚಿಸುವ ನಿಟ್ಟಿನಲ್ಲಿ ಹಾಫಿಲ್ ಸಿರಾಜುದ್ದೀನ್ ಖಾಸಿಮಿ ಅವರ ಒಂದು ದಿನದ ಪ್ರಭಾಷಣವನ್ನು ನಡೆಸಲಾಗುತ್ತಿದೆ. ಅವರು ಪ್ರಥಮ ಬಾರಿಗೆ ಸಾಲ್ಮರಕ್ಕೆ ಆಗಮಿಸುತ್ತಿದ್ದು, ಈ ಕಾರ್ಯಕ್ರಮಕ್ಕೆ ಸುಮಾರು 10 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಸೀದಿ ಸಮಿತಿ ಪ್ರಧಾನ ಕಾರ್ಯದರ್ಶಿ ಜುನೈದ್ ಸಾಲ್ಮರ, ಕಾರ್ಯದರ್ಶಿ ಹಸನ್ ಮುದ್ದೋಡಿ, ಖಜಾಂಜಿ ಮಹಮ್ಮದ್ ಕೋಲ್ಪೆ, ಸದಸ್ಯ ಅಬ್ದುಲ್ ಹಮೀದ್ ಸಾಲ್ಮರ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here