ಕುಂಬ್ಲಾಡಿ ಶ್ರೀ ಕುಕ್ಕೇನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದ ಅಷ್ಠಬಂಧ ಬ್ರಹ್ಮಕಲಶೋತ್ಸವ,ಮಾಚಿಲ ಶ್ರೀ ಉಳ್ಳಾಕುಲು ಉಳ್ಳಾಲ್ತಿ ದೈವದ ಪ್ರತಿಷ್ಠೆ, ನೇಮೋತ್ಸವದ ಆಮಂತ್ರಣ ಅನಾವರಣ

0

ಕಾಣಿಯೂರು: ಕುಂಬ್ಲಾಡಿ ಶ್ರೀ ಕುಕ್ಕೇನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದ ಅಷ್ಠಬಂಧ ಬ್ರಹ್ಮಕಲಶೋತ್ಸವ ಹಾಗೂ ಮಾಚಿಲ ಶ್ರೀ ಉಳ್ಳಾಕುಲು ಉಳ್ಳಾಲ್ತಿ ದೈವದ ಪ್ರತಿಷ್ಠೆ ಮತ್ತು ನೇಮೋತ್ಸವವು ಡಿ 31 ರಿಂದ ಜ 7 ರವರೆಗೆ ನಡೆಯಲಿದ್ದು, ಕಾರ್ಯಕ್ರಮದ ಆಮಂತ್ರಣ ಪತ್ರವನ್ನುದೇವಸ್ಥಾನದಲ್ಲಿ ಅನಾವರಣಗೊಳಿಸಲಾಯಿತು.

ಈ ಸಂದರ್ಭದಲ್ಲಿ ಕುಂಬ್ಲಾಡಿ ಶ್ರೀ ಕುಕ್ಕೇನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನೇಮಣ್ಣ ಗೌಡ ಅಂಬುಲ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಪ್ರದೀಪ್ ಆರ್ ಗೌಡ ಅರುವಗುತ್ತು, ಶ್ರೀ ಕುಕ್ಕೇನಾಥ ಬಾಲಸುಬ್ರಹ್ಮಣ್ಯ ದೇವಳದ ಮೊಕ್ತೇಸರರಾದ ಮಾಚಿಲ ನಾರ್ಣಪ್ಪ ಗೌಡ, ಶ್ರೀ ಮಾಚಿಲ ಉಳ್ಳಾಲ್ತಿ ಕ್ಷೇತ್ರದ ಕ್ಷೇತ್ರಶರಾದ ಮಾಚಿಲ ಪೆರ್ಗಡೆ ಗೌಡ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಜತ್ತಪ್ಪ ಗೌಡ ಉದ್ಲಡ್ಡ, ಕೋಶಾಧಿಕಾರಿ ವಿಶ್ವನಾಥ ಗೌಡ ಅಂಬುಲ, ಅರ್ಚಕ ಗಣಪತಿ ಭಟ್, ಆಡಳಿತ ಪಂಗಡದ ಸಂಚಾಲಕ ಸುಂದರ ದೇವಸ್ಯ, ಕಾರ್ಯದರ್ಶಿ ಜನಾರ್ದನ ಕೊಪ್ಪ, ಕುಮಾರಸ್ವಾಮಿ ಭಟ್, ದೇವಯ್ಯ ಗೌಡ ಖಂಡಿಗ, ಹರಿಯಪ್ಪ ಗೌಡ ಖಂಡಿಗ, ಶೇಖರ ಗೌಡ ಅಂಬುಲ, ಶೇಖರ ಗೌಡಮನೆ, ದಿನೇಶ್ ಕುಕ್ಕುನಡ್ಕ, ರಾಮಣ್ಣ ಗೌಡ ಖಂಡಿಗ, ವಸಂತ ಕುಂಬಾರ ಕೊಪ್ಪ, ವೆಂಕಪ್ಪ ಕುಂಬಾರ ಕೊಪ್ಪ, ಮೋನಪ್ಪ ಗೌಡ ಅಂಬುಲ, ಚಂದ್ರಶೇಖರ ಗೌಡ ಅಂಬುಲ, ಶಿವರಾಮ ಮಾಚಿಲ, ಸತೀಶ್ ಅಂಬುಲ, ಧರ್ಮಪಾಲ ಅಂಬುಲ, ಪುರಂದರ ಅಂಬುಲ, ಗಣೇಶ್ ದೇವಸ್ಯ ಮತ್ತೀತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here