ಕೋಡಿಯಾಡಿಗುತ್ತು ಗ್ರಾಮ ಚಾವಡಿಯ ಪುನರ್ ನಿರ್ಮಾಣಕ್ಕೆ ಚಾಲನೆ

0

ಪುತ್ತೂರು: ಕೋಡಿಂಬಾಡಿ ಗ್ರಾಮದ ಮೂಲ ಕೋಡಿಯಾಡಿ ಗುತ್ತಿನಲ್ಲಿರುವ ಗ್ರಾಮ ಚಾವಡಿಯ ಪುನರ್ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು.


ಕೋಡಿಯಾಡಿಗುತ್ತುಗೆ ಸಂಬಂಧಪಟ್ಟ ವಂಶಸ್ಥರು ಹಾಗೂ ಗ್ರಾಮಸ್ಥರ ಉಪಸ್ಥಿತಿಯಲ್ಲಿ ದ.14 ಮತ್ತು 15ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಲಕ್ಷ್ಮೀಶ ತಂತ್ರಿಯವರ ನೇತೃತ್ವದಲ್ಲಿ ನಡೆಯಿತು. ಕೋಡಿಯಾಡಿಗುತ್ತು ವಂಶಸ್ಥರಾದ ನೋಟರಿ ನ್ಯಾಯವಾದಿ ಬಿ.ನಿರ್ಮಲ್ ಕುಮಾರ್ ಜೈನ್, ವಾರಿಸೇನ ಜೈನ್ ಕೋಡಿಯಾಡಿ, ಗ್ರಾಮಸ್ಥರಾದ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಕೇಶವ ಭಂಡಾರಿ ಕೈಪ, ಸುಭಾಸ್ ನಾಯಕ್ ನೆಕ್ಕರಾಜೆ, ನ್ಯಾಯವಾದಿ ಕುಮಾರನಾಥ ಎಸ್, ಸುಬ್ರಹ್ಮಣ್ಯ ಶೆಟ್ಟಿ ರೆಂಜಾಜೆ, ಅಶೋಕ್ ಗೌಡ ದಡಿಕೆತ್ತಾರು, ಚೆನ್ನಣ್ಣ ಗೌಡ ಬರೆಮೇಲು, ಮಾಧವ ಬರೆಮೇಲು ಮತ್ತಿತರರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here