ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಧನುರ್ಮಾಸ ಪೂಜೆ

0


ಪುತ್ತೂರು: ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪೂರ್ವಪದ್ಧತಿಯಂತೆ ಕಾರ್ತಿಕ ಮಾಸದ ಆಚರಣೆಗಳು ಮುಗಿದು, ಧನುಸಂಕ್ರಮಣದಿಂದ ಆರಂಭವಾಗುವ ಧನುರ್ಮಾಸದಲ್ಲಿ ಸಂಕ್ರಮಣದ ಮರುದಿನದಿಂದ ಮುಂದಿನ ಉತ್ತರಾಯಣ ಪುಣ್ಯಕಾಲ ಮಕರಸಂಕ್ರಮಣದ ದಿನದವರೆಗೆ ‘ಧನುಪೂಜೆ’ ನಡೆಯುತ್ತದೆ. ಡಿ.17 ಧನುಪೂಜೆ ಆರಂಭಗೊಂಡಿದ್ದು ಬೆಳಿಗ್ಗೆ ರುದ್ರ ಪಠಣದ ಮೂಲಕ ಉತ್ಸವಕ್ಕೆ ಚಾಲನೆ ನೀಡಲಾಯಿತು.


ಪ್ರಾಥಃಕಾಲದ ಮತ್ತು ಧನುರ್ಮಾಸದ ಮೊದಲ ಪೂಜೆಗಾಗಿ ನಸುಕಿನ ಜಾವ ದೇವಸ್ಥಾನದಲ್ಲಿ ಭಕ್ತ ಸಾಗಾರ ಹರಿದು ಬಂದಿತ್ತು. ಬೆಳಿಗ್ಗೆ ಗಂಟೆ 4.15ಕ್ಕೆ ವೇದ ಸಂವರ್ಧನ ಪ್ರತಿಷ್ಠಾನದ ನೇತೃತ್ವದಲ್ಲಿ ರುದ್ರಪಠಣ ಆರಂಭಗೊಂಡಿತ್ತು. ಗಂಟೆ 5.30ಕ್ಕೆ ಧನುಪೂಜೆ ನಡೆಯಿತು. ಪೂಜೆಯ ನಂತರ ನಿತ್ಯ ಬಲಿ ಉತ್ಸವ ನಡೆಯಿತು. ದೇವಳದ ಹೊರಾಂಗಣದಲ್ಲಿ ಭಕ್ತರಿಗೆ ಅವಲಕ್ಕಿ ಪ್ರಸಾದ ವಿತರಣೆ ನಡೆಯಿತು.


ರುದ್ರ ಪಠಣ:
ಪರಮೇಶ್ವರನನ್ನು ರುದ್ರಪಠಣದಿಂದ ಸಂಪ್ರೀತಿಗೊಳಿಸುವ ನಿಟ್ಟಿನಲ್ಲಿ ದೇವಳದ ಗೋಪುರದಲ್ಲಿ ಹಲವಾರು ಮಂದಿ ಭಕ್ತರು ವೇದ ಸಂವರ್ದನ ಪ್ರತಿಷ್ಠಾನದ ನೇತೃತ್ವದಲ್ಲಿ ವೇದ ಪಾರಾಯಣ ರುದ್ರ ಪಠಣ ಮಾಡಿದರು.

ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ದೇವಳದ ಮಾಜಿ ಆಡಳಿತ ಮೊಕ್ತೇಸರ ಎನ್.ಕೆ.ಜಗನ್ನಿವಾಸ ರಾವ್, ವೇದ ಸಂವರ್ಧನ ಪ್ರತಿಷ್ಟಾನದ ಅಧ್ಯಕ್ಷ ಎಂ.ಟಿ.ಜಯರಾಮ ಭಟ್, ಪ್ರತಿಷ್ಠಾನದ ಉಪಾಧ್ಯಕ್ಷ ಮಣಿಲಾ ಸಿ ಮಹಾದೇವ ಶಾಸ್ತ್ರೀ, ದೇವಳದ ಅರ್ಚಕ ಜಯರಾಮ್ ಜೋಯಿಷ, ದೇವಳದ ವಾಸ್ತು ಇಂಜಿನಿಯರ್ ಪಿ.ಜಿ.ಜಗನ್ನಿವಾಸ ರಾವ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ಧನುಪೂಜೆಯ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಾಮಚಂದ್ರ ಕಾಮತ್, ಬಿ.ಐತ್ತಪ್ಪ ನಾಯ್ಕ್, ರಾಮ್‌ದಾಸ್ ಗೌಡ, ಬಿ.ಕೆ.ವೀಣಾ, ಡಾ. ಸುಧಾ ಎಸ್ ರಾವ್, ರವೀಂದ್ರನಾಥ ರೈ ಬಳ್ಳಮಜಲು. ದೇವಳದ ಪ್ರಧಾನ ಅರ್ಚಕ ವೇ ಮೂ ವಿ.ಎಸ್ ಭಟ್, ವೇ ಮೂ ವಸಂತ ಕೆದಿಲಾಯ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಎನ್.ಸುಧಾಕರ್ ಶೆಟ್ಟಿ, ಮಾಜಿ ಮೊಕ್ತೇಸರ ನ್ಯಾಯವಾದಿ ಚಿದಾನಂದ ಬೈಲಾಡಿ, ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here