ಮೂಡಬಿದಿರೆ ಆಳ್ವಾಸ್‌ನಲ್ಲಿ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ; ಮುಂಡೂರು ಶಾಲೆಯಿಂದ ಹಸಿರು ಕಾಣಿಕೆ ಸಂಗ್ರಹ-ಚಾಲನೆ

0

ಪುತ್ತೂರು: ಆಳ್ವಾಸ್ ಪ್ರತಿಷ್ಠಾನ ಮೂಡಬಿದಿರೆ ಇಲ್ಲಿ ಡಿ.21ರಿಂದ 27ರವರೆಗೆ ನಡೆಯಲಿರುವ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ಪ್ರಯುಕ್ತ ಮುಂಡೂರು ಶಾಲಾ ವತಿಯಿಂದ ವಿದ್ಯಾರ್ಥಿಗಳು ಹಾಗೂ ಊರವರಿಂದ ಹಸಿರು ಕಾಣಿಕೆಯನ್ನು ಸಂಗ್ರಹಿಸಲಾಗಿದ್ದು ಅದನ್ನು ಪುತ್ತೂರು ಸುದಾನ ವಸತಿಯುತ ಶಾಲೆಗೆ ತಲುಪಿಸುವ ಸಲುವಾಗಿ ಮುಂಡೂರು ಪ್ರಾ.ಕೃ.ಪ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ರೈ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಹಸಿರು ಕಾಣಿಕೆಗೆ ಚಾಲನೆಯನ್ನು ನೀಡಿ ಶುಭ ಹಾರೈಸಿದರು.

ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ರಮೇಶ್ ಗೌಡ ಪಜಿಮಣ್ಣು ಶುಭ ಹಾರೈಸಿದರು. ಎಸ್.ಡಿ.ಎಂ.ಸಿ ನಾಮನಿರ್ದೇಶಿತ ಸದಸ್ಯರು ಹಾಗೂ ಮುಂಡೂರು ಗ್ರಾ.ಪಂ ಸದಸ್ಯರಾಗಿರುವ ಉಮೇಶ್ ಗೌಡ ಅಂಬಟ, ಶಾಲಾ ಹಿರಿಯ ವಿದ್ಯಾರ್ಥಿ ಕು.ಸುಪ್ರಿಯಾ ರೈ ,ಶಾಲಾ ಸ್ಕೌಟ್ ಶಿಕ್ಷಕಿ ಸಂಧ್ಯಾ, ಬುಲ್ ಬುಲ್ ಶಿಕ್ಷಕಿ ಶಶಿಕಲಾ, ಶಿಕ್ಷಕರಾದ ರವೀಂದ್ರ ಶಾಸ್ತ್ರಿ, ನಾಗವೇಣಿ ಮತ್ತು ಶಕುಂತಲಾ, ಎಸ್‌ಡಿಎಂಸಿ ಸದಸ್ಯೆ ಜ್ಯೋತಿ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ವಿಜಯ ಪಿ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು. ಗೈಡ್ ಶಿಕ್ಷಕಿ ವನಿತಾ ವಂದಿಸಿದರು. ಸ್ಕೌಟ್ ಹಾಗೂ ಗೈಡ್ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here