ಅಬ್ದುಲ್ ಕುಂಞಿ ಮುಂಡೂರು ಬಿಜೆಪಿಯಿಂದ ಉಚ್ಛಾಟನೆ?

0

ಪುತ್ತೂರು:ಶಾಸಕ, ಸಂಸದರು ಮತ್ತು ಕೆಲವು ಬಿಜೆಪಿ ಪ್ರಮುಖರ ವಿರುದ್ಧವೇ ಮಾತನಾಡಿದ್ದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಘಟನೆ ಬೆನ್ನಲ್ಲೇ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಮಾಜಿ ಅಧ್ಯಕ್ಷ ಅಬ್ದುಲ್ ಕುಂಞಿ ಮುಂಡೂರು ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಾ.ಪಂ.ಕೆಡಿಪಿ ನಾಮನಿರ್ದೇಶಿತ ಸದಸ್ಯರೂ ಆಗಿರುವ ಅಬ್ದುಲ್ ಕುಂಞಿಯವರು ಬೇರೊಬ್ಬರೊಂದಿಗೆ ಮಾತನಾಡುವ ಸಂದರ್ಭ ಶಾಸಕ ಸಂಜೀವ ಮಠಂದೂರು, ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಪಕ್ಷದ ಕೆಲವು ಪ್ರಮುಖರ ವಿರುದ್ಧವೇ ಮಾತನಾಡಿದ್ದರೆನ್ನಲಾದ ಆಡಿಯೋ ವೈರಲ್ ಆಗಿತ್ತು.ಈ ಘಟನೆ ಬೆನ್ನಲ್ಲೇ ಅಬ್ದುಲ್ ಕುಂಞಿ ಅವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳುವಂತೆ ಗ್ರಾಮಾಂತರ ಮಂಡಲ ಬಿಜೆಪಿ ವತಿಯಿಂದ ಜಿಲ್ಲಾಧ್ಯಕ್ಷರಿಗೆ ಶಿಫಾರಸ್ಸು ಮಾಡಲಾಗಿತ್ತು.ಈ ಹಿನ್ನೆಲೆಯಲ್ಲಿ ಅಬ್ದುಲ್ ಕುಂಞಿ ಮುಂಡೂರು ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟಿಸಲಾಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.ಆಡಿಯೋದಲ್ಲಿರುವ ತನ್ನ ಧ್ವನಿ ತನ್ನದಲ್ಲ ಎಂದು ಅಬ್ದುಲ್ ಕುಂಞಿಯವರು ಸ್ಪಷ್ಟನೆ ನೀಡಿದ್ದರು.

LEAVE A REPLY

Please enter your comment!
Please enter your name here