ಬಂಗಾರಡ್ಕ-ಚನಿಲ ರಸ್ತೆ ಕಾಂಕ್ರಿಟೀಕರಣಕ್ಕೆ ಗುದ್ದಲಿಪೂಜೆ, ಹೈಮಾಸ್ಟ್ ಸೋಲಾರ್ ಲೈಟ್ ಉದ್ಘಾಟನೆ

0

ಪುತ್ತೂರು: ಬಂಗಾರಡ್ಕ-ಚನಿಲ ರಸ್ತೆಗೆ ರೂ.20ಲಕ್ಷ ಅನುದಾನದಲ್ಲಿ ನಡೆಯಲಿರುವ ಕಾಂಕ್ರಿಟೀಕರಣಕ್ಕೆ ಗುದ್ದಲಿ ಪೂಜೆ ಹಾಗೂ ಬಂಗಾರಡ್ಕ ಶ್ರೀರಾಮ ಭಜನಾ ಮಂದಿರದ ಬಳಿಯಲ್ಲಿ ಅಳವಡಿಸಲಾದ ಹೈಮಾಸ್ಟ್ ಸೋಲಾರ್ ದೀಪದ ಉದ್ಘಾಟನೆಯು  ನೆರವೇರಿತು.

ಶಾಸಕ ಸಂಜೀವ ಮಠಂದೂರು ಗುದ್ದಲಿಪೂಜೆ ನೆರವೇರಿಸಿದರು. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಸೋಲಾರ್ ದೀಪ ಉದ್ಘಾಟಿಸಿದರು. ಕುಂಜೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರದೀಪಕೃಷ್ಣ ಬಂಗಾರಡ್ಕ, ಆರ್ಯಾಪು ಗ್ರಾ.ಪಂ ಸದಸ್ಯೆ ಗೀತಾ, ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಲೋಕೇಶ್ ಗೌಡ, ಕಾರ್ಯದರ್ಶಿ ಕಿಟ್ಟಣ್ಣ ರೈ, ಆರ್ಯಾಪು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಜಯಂತ ಶೆಟ್ಟಿ ಕಂಬಳತ್ತಡ್ಡ, ಗಣಪತಿ ನಾಯಕ್, ತಾರಾ ವಿ ರೈ, ಕೇಶವ ಗೌಡ, ಸಂತೋಷ್ ಗೌಡ, ಅಭಿಲಾಷ್ ರೈ, ಉದಯ ನಾಯ್ಕ, ವಿಶ್ವನಾಥ ಕುಲಾಲ್, ವೆಂಕಟ್ರಮಣ ನಾಯಕ್, ರಾಮಕೃಷ್ಣ ಭಟ್, ಹರಿಣಾಕ್ಷಿ ರೈ, ವಿನೋದ್ ಸೇರಿದಂತೆ ಹಲವು ಮಂದಿ ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here