ರೋಟರಿ ಜಲಸಿರಿ ಯೋಜನೆಯ ಪ್ರಯುಕ್ತ ಸಂಪ್ಯ ವಿಷ್ಣುಮೂರ್ತಿ ದೇವಸ್ಥಾನಕ್ಕೆ ವಾಟರ್ ಫಿಲ್ಟರ್ ಕೊಡುಗೆ

0

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಯುವ ಇದರ ಜಿಲ್ಲಾ ಗವರ್ನರ್ ಭೇಟಿ ಸಂದರ್ಭದಲ್ಲಿ ರೋಟರಿ ಜಲಸಿರಿ ಯೋಜನೆಯ ಪ್ರಯುಕ್ತ ಸಾರ್ವಜನಿಕ ಉದ್ದೇಶಕ್ಕೆ ಸಂಪ್ಯ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಕುಡಿಯುವ ನೀರಿನ ವಾಟರ್ ಫಿಲ್ಟರ್ ಕೊಡುಗೆಯಾಗಿ ನೀಡಲಾಯಿತು.

ರೋಟರಿ ವಲಯ ಸೇನಾನಿ ಡಾ. ಹರ್ಷ ಕುಮಾರ್ ರೈ ಮಾಡವು ಅವರು ದೇವಸ್ಥಾನಕ್ಕೆ ಕೊಡುಗೆಯಾಗಿ ನೀಡಿದ ವಾಟರ್ ಫಿಲ್ಟರ್ ಇದರ ಹಸ್ತಾಂತರ ಕಾರ್ಯಕ್ರಮವನ್ನು ರೋಟರಿ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ಅವರ ಉಪಸ್ಥಿತಿಯಲ್ಲಿ ನಡೆಸಲಾಯಿತು.

ಇದೇ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಯಿಂದ ಜಿಲ್ಲಾ ಗವರ್ನರ್ ಮತ್ತು ರೋಟರಿ ಪದಾಧಿಕಾರಿಗಳನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ರೋಟರಿ ಅಸಿಸ್ಟೆಂಟ್ ಗವರ್ನರ್ ಎ.ಜೆ .ರೈ ರೋಟರಿ ಯುವದ ಅಧ್ಯಕ್ಷೆ ರಾಜೇಶ್ವರಿ ಆಚಾರ್, ಕಾರ್ಯದರ್ಶಿ ಅಶ್ವಿನಿ ಕೃಷ್ಣ ಮುಳಿಯ, ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯರಾದ ಲಕ್ಷ್ಮಣ ಬೈಲಾಡಿ, ಜಯಕುಮಾರ್ ನಾಯರ್, ಸೀತಾರಾಮ ಶೆಟ್ಟಿ ಕಂಬಳತಡ್ಡ ,ವಿನ್ಯಾಸ್, ಶಶಿಕಲಾ ಶೆಟ್ಟಿ, ಸೋಮಶೇಖರ ರೈ ಹಾಗೂ ರೋಟರಿ ಯುವದ ಸದಸ್ಯರುಗಳಾದ ರತ್ನಾಕರ್ ರೈ, ಚೇತನ್ ಪ್ರಕಾಶ್ ಕಜೆ, ಭಾರತ್ ಪೈ, ನರಸಿಂಹಪೈ ಮತ್ತು ಸುದರ್ಶನ್ ರೈ ಸೇರಿದಂತೆ ಹಲವರು ಉಪಸ್ಥಿತರಿದ್ದರು.

11ನೇ ವಾಟರ್ ಫಿಲ್ಟರ್ ಹಸ್ತಾಂತರ

ದಾನಿ ಹರ್ಷಕುಮಾರ ರೈ ಮಾಡಾವು ಪುತ್ತೂರು ತಾಲೂಕಿನ ದೇವಸ್ಥಾನಗಳಿಗೆ ಕೊಡುಗೆಯಾಗಿ ನೀಡುತ್ತಿರುವ 11ನೇ ವಾಟರ್ ಫಿಲ್ಟರ್ ಅನ್ನು ರೋಟರಿ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ಹಸ್ತಾಂತರಿಸಿದರು.

LEAVE A REPLY

Please enter your comment!
Please enter your name here