ಪುರುಷರಕಟ್ಟೆಯಲ್ಲಿ ಕಿಡ್ಸ್ ಆರ್ಟ್ ಫೆಸ್ಟ್ ಉದ್ಘಾಟನೆ

0

ಪುತ್ತೂರು: ಮಕ್ಕಳಲ್ಲಿ ಹುದುಗಿರುವ ಪ್ರತಿಭೆಯನ್ನು ಹೊರತರುವ ಉದ್ಧೇಶದಿಂದ ದ.25ರಂದು ಪುರುಷರಕಟ್ಟೆ ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಹಾಲ್‌ನಲ್ಲಿ ನಿದಾ ಸನೀರ್‌ರವರ ನೇತೃತ್ವದಲ್ಲಿ ಕಿಡ್ಸ್ ಆರ್ಟ್ ಫೆಸ್ಟ್ ಜರಗಿತು. 1 ರಿಂದ 10ನೇ ತರಗತಿವರೆಗಿನ ಮಕ್ಕಳನ್ನು ಮೂರು ವಿಭಾಗಗಳಾಗಿ ವಿಂಗಡಿಸಿ ಸ್ಪರ್ಧೆ ನಡೆಸಲಾಯಿತು.

ಬೆಳಿಗ್ಗೆ ಕಾರ್ಯಕ್ರಮದ ಉದ್ಘಾಟನೆಯ ಬಳಿಕ ಕಿಡ್ಸ್ ಆರ್ಟ್ ಫೆಸ್ಟ್‌ಗೆ ಚಾಲನೆ ನೀಡಲಾಯಿತು. ಸುಮಾರು ೫೦ಕ್ಕೂ ಮೇಲ್ಪಟ್ಟು ಮಕ್ಕಳು ಕಿಡ್ಸ್ ಆರ್ಟ್ ಫೆಸ್ಟ್‌ನಲ್ಲಿ ಪಾಲ್ಗೊಂಡಿದ್ದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮುರಳೀಧರ ಸುವರ್ಣರವರು ವಹಿಸಿದ್ದರು. ಅತಿಥಿಗಳಾಗಿ ಜಯರಾಮ ಬಿ., ಕುಶಾಲಪ್ಪ ಗೌಡ, ದೇವಪ್ಪ ಹಾಗೂ ಹುಸೈನ್‌ರವರು ಭಾಗವಹಿಸಿದ್ದರು.

ತೀರ್ಪುಗಾರರಾಗಿ ಸತೀಶ್ ಮತ್ತು ದಂಪತಿ ಆಗಮಿಸಿದ್ದರು. ಮುರಳೀಧರ ಸುವರ್ಣ, ಜಯರಾಮ, ಮುಬೀನ್ ಸಾಹೇಬ್, ಹುಸೈನ್, ಪರಮೇಶ್ವರ ಭಂಡಾರಿ, ರವಿ ಗೌಡ, ಕುಶಾಲಪ್ಪ ಗೌಡ, ಸಂದೀಪ್, ಗಂಗಾಧರ ಜೋಗಿ, ಜಿತೇಶ್, ಸಚಿಂದ್ರ, ಶನೀರ್ ಶೇಖ್, ನಹೀಮ್, ಪುಣ್ಯ ಎಂ. ರೈ, ಸಫಾತ್, ಮುಕ್ವೆ ಹನಫಿ ಯಂಗ್‌ಮೆನ್ಸ್, ಹಿದಾಯತ್ ಶೇಖ್ ಹಾಗೂ ಕಿಡ್ಸ್ ಆರ್ಟ್ ಫೆಸ್ಟ್‌ನ ಸದಸ್ಯರು ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿದ್ದರು. ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು. ನಿದಾ ಸನೀರ್ ಸ್ವಾಗತಿಸಿ ವಂದಿಸಿದರು.

ವಿಜೇತರು

ವರ್ಗ ಎ- ಆರಾಧ್ಯ ಪುರುಷರಕಟ್ಟೆ, ಗಗನ್, ಮುಹಮ್ಮದ್ ಇಝಾನ್, ವರ್ಗ ಬಿ- ಮಿಥಾಲಿ, ಹೃಥ್ವಿ, ಅಮೃತಾ ಎಸ್. ನಾಯಕ್, ವರ್ಗ ಸಿ-ಖುಷಿತಾ ಸಿ.ಕೆ., ಯಾಶಿಕ ಮಜಲು ಶಾಂತಿಗೋಡು, ತನುಷ್‌ಪುರುಷರಕಟ್ಟೆ ರವರು ವಿಜೇತರಾಗಿದ್ದಾರೆ.

LEAVE A REPLY

Please enter your comment!
Please enter your name here