ಜ.3ಕ್ಕೆ ಕಲ್ಲೇಗ ಮಾಡತ್ತಾರು ಪುಣ್ಯಕುಮಾರ- ನೇಮೋತ್ಸವ, ನಾಗಬ್ರಹ್ಮ ಪ್ರತಿಷ್ಠೆ ಪುತ್ತೂರಿನಲ್ಲಿ ಆಮಂತ್ರಣ ಪತ್ರ ವಿತರಣಾ ಕಾರ್ಯಕ್ರಮ

0

ಪುತ್ತೂರು: ಕಲ್ಲೇಗ ಮಾಡತ್ತಾರು ಶ್ರೀ ಪುಣ್ಯಕುಮಾರ ಸ್ವಾಮಿ ಹಾಗೂ ಧರ್ಮ ದೈವಗಳ ಪುನ್ಚೈತನ್ಯ ,ಕಲಶಾಭಿಷೇಕ ಹಾಗೂ ನೇಮೋತ್ಸವ ಮತ್ತು ನಾಗಬ್ರಹ್ಮ ಪ್ರತಿಷ್ಠೆ ಕಾರ್ಯಕ್ರಮ ಜ.3 ರಿಂದ 6ರ ತನಕ ನಡೆಯಲಿದ್ದು, ಇದರ ಆಮಂತ್ರಣ ಪತ್ರ ವಿತರಣಾ ಕಾರ್ಯ ಡಿ.28 ರಂದು ನಡೆಯಿತು.


ಮುರ ಜಂಕ್ಷನ್ ನಿಂದ ಮೆರವಣಿಗೆ ಹೊರಟು ಕಲ್ಲೇಗ ಮಾರ್ಗವಾಗಿ ಕಾರ್ಜಲು ಗುತ್ತಿನ ಚಾವಡಿಯಲ್ಲಿ ಆಮಂತ್ರಣ ಪತ್ರ ವಿತರಣಾ ಕಾರ್ಯಕ್ರಮ ಸಮಾಪನೆಗೊಂಡಿತು. ಶ್ರೀ ಪುಣ್ಯ ಕುಮಾರ ದೇವಸ್ಥಾನದ ಅಧ್ಯಕ್ಷ ಕೆ. ಜೀವಂಧರ್ ಜೈನ್, ಕಾರ್ಯಾದರ್ಶಿ ನಾರಾಯಣ ಗೌಡ ಕಲ್ಲೇಗ, ಆಡಳಿತ ಸಮಿತಿಯ ಎಲ್ಲ ಸದಸ್ಯರು ಹಾಗೂ ಊರಿನ ಗ್ರಾಮಸ್ಥರು ಭಾಗಿಯಾದರು.

LEAVE A REPLY

Please enter your comment!
Please enter your name here