ಅಗಳಿ ಶ್ರೀ ಸದಾಶಿವ ದೇವಸ್ಥಾನದ ಬ್ರಹ್ಮಕಲಶೋತ್ಸವ- ಧಾರ್ಮಿಕ ಸಭೆ

0

ಮನಸ್ಸಿನ ಜೊತೆ ಭಾವನೆಗಳು ಚೆನ್ನಾಗಿದ್ದರೆ ಬದುಕಿನಲ್ಲಿ ನೆಮ್ಮದಿ- ಮಾಣಿಲ ಶ್ರೀ

ಹಿಂದೂ ಧರ್ಮದ ಶ್ರೇಯಸ್ಸಿಗಾಗಿ, ಜಾಗೃತಿಗಾಗಿ ಕಾರ್ಯಪ್ರವೃತ್ತರಾಗೋಣ- ರಾಜಶೇಖರಾನಂದ ಶ್ರೀ

ಇನ್ನೊಬ್ಬರನ್ನು ಸಂತೋಷ ಪಡಿಸುವ ಕೆಲಸ ಮಾಡಬೇಕು- ಮೋಹನ್ ಗೌಡ ಇಡ್ಯಡ್ಕ

ಕಾಣಿಯೂರು: ನಿಷ್ಕಲ್ಮಷವಾಗಿ ಮಾಡುವ ಪ್ರತಿಯೊಂದು ಕಾರ್ಯಗಳೂ ನಮ್ಮನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ. ಸಮರ್ಪಣಾ ಭಾವದ ಭಕ್ತಿಗೆ ಭಗವಂತ ಒಲಿಯುತ್ತಾನೆ. ಸುಂದರ ಬದುಕಿಗೆ ದಾರಿ ದೀಪವಾದ ನಮ್ಮ ತುಳುನಾಡಿನ ಆಚರಣೆಗಳು ಇವತ್ತು ತನ್ನ ಮೂಲಸತ್ವವನ್ನು ಕಳೆದುಕೊಂಡಿದೆ. ಟಿ.ವಿ ಮೊಬೈಲ್‌ಗಳ ಹಾವಳಿಯಿಂದ ನಮ್ಮ ಅನೇಕ ಆಚರಣೆಗಳು ನೇಪಥ್ಯಕ್ಕೆ ಸರಿಯುತ್ತಿದೆ ಎಂದು ಶ್ರೀ ಧಾಮ ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ನುಡಿದರು.


ಅಗಳಿ ಶ್ರೀ ಸದಾಶಿವ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ಜ ೧೩ರಂದು ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.ನಮ್ಮ ಹಿರಿಯರು ಅತೀ ಸುಂದರವಾಗಿ ಆರೋಗ್ಯ ಪೂರ್ಣ ಜೀವನ ನಡೆಸುತ್ತಿದ್ದರು. ಕಾರಣ ಸೇವಿಸುತ್ತಿದ್ದ ಆಹಾರ ಪದ್ಧತಿ ಬಹಳ ಅಚ್ಚುಕಟ್ಟಿನ ಜೊತೆ ವೈಶಿಷ್ಟ್ಯತೆಯಿಂದ ಕೂಡಿರುತ್ತಿತ್ತು. ಜೀವನದಲ್ಲಿ ಆತ್ಮಶಾಂತಿಯಿಂದ ಮತ್ತು ನೆಮ್ಮದಿಯಿಂದ ಜೀವನ ಮಾಡುವುದಾದರೆ ಅದು ದೇವತಾರಾಧನೆಯಿಂದ ಮಾತ್ರ ಸಾಧ್ಯ ಎಂದ ಸ್ವಾಮೀಜಿಯವರು ಭಕ್ತರ ಸಂಕಲ್ಪಗಳು ಗಟ್ಟಿಯಾದರೆ ಉದ್ದೇಶಿತಕಾರ್ಯ ಸಾಧ್ಯ. ಮನಸ್ಸಿನ ಜೊತೆ ಭಾವನೆಗಳು ಚೆನ್ನಾಗಿದ್ದರೆ ಮಾತ್ರ ಬದುಕಿನಲ್ಲಿ ನೆಮ್ಮದಿ ಕಾಣಲು ಸಾಧ್ಯ ಎಂದರು.

ಮಂಗಳೂರು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ನಿತ್ಯ ಬದುಕಿನಲ್ಲಿ ಶಾಂತಿ ನೆಮ್ಮದಿ ಇರಬೇಕು ಎಂದರೆ ಆಧ್ಯಾತ್ಮಿಕ ಚಿಂತನೆಯೊಂದಿಗೆ ದೇವಾಲಯಗಳಿಗೆ ಭೇಟಿ ನೀಡಬೇಕು. ಆಧ್ಯಾತ್ಮಿಕ ಚಿಂತನೆಗಳನ್ನು ಮಕ್ಕಳಿಗೆ ತಿಳಿಸುವ ಮೂಲಕ ಸುಸಂಸ್ಕೃತರನ್ನಾಗಿ ಮಾಡಬೇಕು. ನಮ್ಮ ನಡೆ ಸನ್ಮಾರ್ಗದತ್ತ ಇರಬೇಕು. ಧರ್ಮ ಉಳಿದರೆ ಸಮಾಜ ಉಳಿಯುತ್ತದೆ. ಸಂಸ್ಕೃತಿಯ ಬೇರುಗಳನ್ನು ಗಟ್ಟಿ ಮಾಡುವ ಮೂಲಕ ಧರ್ಮವನ್ನು ಉಳಿಸುವ ಕಾರ್ಯ ಆಗಬೇಕಿದೆ. ಹಿಂದೂ ಸಮಾಜ ಉನ್ನತ ಮಟ್ಟದಲ್ಲಿ ಬೆಳೆಯುವ ಸಂದರ್ಭ ನಮ್ಮ ಜವಾಬ್ದಾರಿಯನ್ನು ಮರೆಯದೆ ಹಿಂದೂ ಧರ್ಮದ ಶ್ರೇಯಸ್ಸಿಗಾಗಿ, ಜಾಗೃತಿಗಾಗಿ ಕಾರ್ಯಪ್ರವೃತ್ತರಾಗೋಣ ಎಂದರು. ಧರ್ಮ ಮತ್ತು ಸಂಸ್ಕಾರ ಒಂದಕ್ಕೊಂದು ಪೂರಕವಾಗಿದ್ದು ದೇವಾಲಯಗಳಲ್ಲಿ ನಡೆಯುವ ಬ್ರಹ್ಮಕಲಶ ನಮ್ಮ ಸಂಸ್ಕೃತಿಯನ್ನು ಪೂರಕವಾಗಿ ಬೆಳೆಸಲು ಸಹಕರಿಯಾಗುತ್ತದೆ ಎಂದವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರು, ನ್ಯಾಯವಾದಿ ಮೋಹನ ಗೌಡ ಇಡ್ಯಡ್ಕ ಮಾತನಾಡಿ,ನಾವು ಇನ್ನೊಬ್ಬರನ್ನು ಅನುಕರಣೆ ಮಾಡಿಕೊಂಡು, ಇನ್ನೊಬ್ಬರ ಜೀವನದ ಜೊತೆ ಆಟವಾಡುತ್ತಿರುವುದನ್ನು ಬಿಟ್ಟು, ಉತ್ತಮ ಸಮಾಜ ನಿರ್ಮಾಣ ಮಾಡಲು ಸಹಕಾರಿಯಾಗಬೇಕು. ನಮ್ಮ ನಮ್ಮ ಜವಾಬ್ದಾರಿಯನ್ನು ಜೀವನದಲ್ಲಿ ಅರಿತುಕೊಂಡಾಗ ಸಮಾಜದ ಪರಿವರ್ತನೆಯ ಜೊತೆಗೆ ಒಗ್ಗಟ್ಟಾಗಿ ಜೀವನ ನಡೆಸಲು ಮುಂದಾಗಬೇಕು. ಇನ್ನೊಬ್ಬರನ್ನು ಸಂತೋಷ ಪಡಿಸುವ ಕೆಲಸ ಮಾಡಬೇಕು ಎಂದರು.

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದ ಅಧ್ಯಕ್ಷ ಪದ್ಮನಾಭ ಶೆಟ್ಟಿ,ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯ ಸಂಚಾಲಕ ಭಾಸ್ಕರ್ ಆಚಾರ್ಯ ಹಿಂದಾರು, ಕುಂಬ್ಲಾಡಿ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರಾದ ಚಂದ್ರಕಲಾ ಸಿ. ಜೆ. ಅರುವಗುತ್ತು, ಪುತ್ತೂರು ಒಕ್ಕಲಿಗ ಗೌಡ ಸಮುದಾಯ ಪತ್ತಿನ ಸಹಕಾರ ಸಂಘದ ನಿರ್ದೇಶಕ ಪ್ರವೀಣ್ ಕುಂಟ್ಯಾನ, ನ್ಯಾಯವಾದಿ ನಿರ್ಮಲ್ ಕುಮಾರ್ ಜೈನ್, ಬೆಳಂದೂರು ಗ್ರಾ.ಪಂ.ಸದಸ್ಯರಾದ ಜಯಂತ ಅಬೀರ, ಗೌರಿ ಗಿರಿಯಪ್ಪ ನಾಯ್ಕ, ನಾವೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ನಾಗೇಶ್ ರೈ ಮಾಳ, ಕೆಯ್ಯೂರು ಶ್ರೀ ಮಹಿಷಾಮರ್ದಿನೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎ. ಕೆ ಜಯರಾಮ್ ರೈ ಮಾಡಾವು, ಕುಂಬ್ಲಾಡಿ ಶ್ರೀ ಕುಕ್ಕೇನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನೇಮಣ್ಣ ಗೌಡ ಅಂಬುಲ, ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದಾಮೋದರ ಗೌಡ ಕಕ್ವೆ, ಅಗಳಿ ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಉದಯ ರೈ ಮಾದೋಡಿ, ಸದಸ್ಯರಾದ ಕುಶಾಲಪ್ಪ ಗೌಡ ಅಗಳಿ ಮಾದೇರಿ, ತಾರಾ ಶಿವಣ್ಣ ಗೌಡ ಬೆಳಂದೂರು. ಅನುವಂಶೀಯ ಮೊಕ್ತೇಸರರಾದ ಶಿವರಾಮ ಗೌಡ ಅಗಳಿ, ಉದಯ ಕುಮಾರ್ ಅಗಳಿ ಉಪಸ್ಥಿತರಿದ್ದರು. ಮೋನಪ್ಪ ಗೌಡ ಅಗಳಿ ಕೂರೋಡಿ, ಮೋಹನ್ ಅಗಳಿ, ಜಗದೀಶ್ ಅಗಳಿ, ಯಶವಂತ್ ಗೌಡ ಕಳುವಾಜೆ, ಕೇಶವ ಗೌಡ ಬೈತಡ್ಕ, ಚಿದಾನಂದ ಗೌಡ ಮೆದು ಬಾರಿಕೆ, ಸಂಧ್ಯಾ ಸಂತೋಷ್ ಅಗಳಿ, ಹರೀಶ್ ಮುಂಡಾಳ, ಭಾವನಿಶಂಕರ ಗೌಡ ಅಗಳಿ, ಹರೀಶ್ ಕಾಮನಾಜೆ, ಲಕ್ಷ್ಮಣ ಅಗಳಿ, ರಾಧಾಕೃಷ್ಣ ಗೌಡ ಬೈತಡ್ಕ, ನಾಗರತ್ನ ಉದಯ ಅಗಳಿ, ಶ್ರೀಧರ್ ಅಗಳಿ ಅತಿಥಿಗಳಿಗೆ ಶಾಲು, ತಾಂಬೂಲ, ಸ್ಮರಣಿಕೆ ನೀಡಿ ಗೌರವಿಸಿದರು.

ಅಂಕಿತಾ ಪ್ರಾರ್ಥಿಸಿದರು, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್ ಮರಕ್ಕಡ ಸ್ವಾಗತದೊಂದಿಗೆ ಪ್ರಾಸ್ತಾವಿಕ ಮಾತನಾಡಿದರು. ಪ್ರಾಚಾರ್ಯರಾದ ಸದಾನಂದ ರೈ ಕೂವೆಂಜ ಸನ್ಮಾನಿತರ ವಿವರ ವಾಚಿಸಿದರು. ವಿಜೇತ್ ಮುಂಡಾಳ ವಂದಿಸಿದರು. ಸವಣೂರು ಗ್ರಾ.ಪಂ.ಸದಸ್ಯ ಗಿರಿಶಂಕರ್ ಸುಲಾಯ ಕಾರ್ಯಕ್ರಮ ನಿರೂಪಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮ:

ಸಂಜೆ ಕಾಯಿಮಣ ಅಂಗನವಾಡಿ ಪುಟಾಣಿಗಳಿಂದ ವೈವಿಧ್ಯಮಯ ಕಾರ್ಯಕ್ರಮ, ರಾತ್ರಿ ಅಂತರ್ರಾಷ್ಟ್ರೀ ಯ ಯೋಗಪಟು ಪ್ರಣಮ್ಯ ಅಗಳಿ ಇವರಿಂದ ಯೋಗ ಪ್ರದರ್ಶನ ಹಾಗೂ ಗೋಪಾಲಕೃಷ್ಣ ಕಡೆಂಗ ನೇತೃತ್ವದ ಸೌಂಡ್ಸ್ ಮೆಲೋಡಿ ಪುತ್ತೂರು ಇವರಿಂದ ಭಕ್ತಿ ರಸಮಂಜರಿ ನಡೆಯಿತು.
ಸನ್ಮಾನ: ಅಂತಾರಾಷ್ಟ್ರೀಯ ಯೋಗ ಪಟು, ಚಿನ್ನದ ಪದಕ ವಿಜೇತೆ ಪ್ರಣಮ್ಯ ಅಗಳಿ ಅವರನ್ನು ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here