ಹಾರಾಡಿ ರೈಲ್ವೇ ರಸ್ತೆ ಕಾಂಕ್ರೀಟಿಕರಣ ಕೆಲಸ ಆರಂಭ – ಜೀವಂಧರ್ ಜೈನ್

0

ಪುತ್ತೂರು: ಹಾರಾಡಿಯಿಂದ ರೈಲ್ವೇ ನಿಲ್ದಾಣ ರಸ್ತೆ ಕಾಂಕ್ರೀಟಿಕರಣ ಕೆಲಸ ಆರಂಭಗೊಂಡಿದೆ. 5.5 ಮೀಟರ್ ಅಗಲದ ರಸ್ತೆ ಕಾಂಕ್ರೀಟಿಕರಣಕ್ಕೆ ಮಣ್ಣು ಅಗೇತ ಕೆಲಸ ನಡೆಯುತ್ತಿದೆ ಎಂದು ನಗರಸಭೆ ಅಧ್ಯಕ್ಷ ಕೆ ಜೀವಂಧರ್ ಜೈನ್ ತಿಳಿಸಿದ್ದಾರೆ.

ಜ.13 ರಂದು ಸಂಜೆ ಅವರು ಹಾರಾಡಿ ರೈಲ್ವೇ ನಿಲ್ದಾಣದ ಕಾಂಕ್ರೀಟ್ ರಸ್ತೆ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಬಹು ನಿರೀಕ್ಷಿತ ಬಹು ಜನರ ಹಲವು ವರ್ಷಗಳ ಬೇಡಿಕೆಯಾದ ಈ ರಸ್ತೆ ಅಭಿವೃದ್ದಿಗೆ ಶಾಸಕರ ಮತ್ತು ಸಂಸದರ ಪ್ರಯತ್ನದಿಂದ ರಸ್ತೆ ಅಭಿವೃದ್ಧಿಗೆ ರೈಲ್ವೇ ಇಲಾಖೆ ಅನುಮತಿ ನೀಡಿದೆ. ಇದೀಗ ಕಾಮಗಾರಿ ನಡೆಯುತ್ತಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ನಗರಸಭೆ ಇಂಜಿನಿಯರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here