









ಪುತ್ತೂರು: ಪುತ್ತೂರು ಎಪಿಎಂಸಿ ಸದಸ್ಯರು ದೆಹಲಿಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷರಾದ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಜೊತೆಯಲ್ಲಿ ಬಿಜೆಪಿ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಯಿತು.







ಎಪಿಎಂಸಿ ವತಿಯಿಂದ ಸದಸ್ಯರ ಅಧ್ಯಾಯನ ಪ್ರವಾಸ ಕೈಗೊಂಡಿದ್ದು ಎ.6 ರಂದು ದೆಹಲಿಯಲ್ಲಿ ನಳಿನ್ ಕುಮಾರ್ ಅವರನ್ನು ಭೇಟಿ ಮಾಡಿದರು. ಇದೇ ಸಂದರ್ಭ ಬಿಜೆಪಿ ಸಂಸ್ಥಾಪನಾ ದಿನಾಚರಣೆ ಆಚರಿಸಲಾಯಿತು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶಾಮಲಾ ಕುಂದರ್ ಆಚರಣೆಯಲ್ಲಿ ಭಾಗವಹಿಸಿದ್ದರು ಚಿಕ್ಕಮಗಳೂರು ಜಿಲ್ಲಾ ಕಾರ್ಯದರ್ಶಿ ಅವಿನಾಶ್ ದಾವಣಗೆರೆ ಹಾವೇರಿ ಜಿಲ್ಲೆಯ ಕಾರ್ಯದರ್ಶಿ ಲಿಂಗರಾಜು, ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು, ಉಪಾಧ್ಯಕ್ಷ ಮಂಜುನಾಥ್ ಎಂ ಎಸ್, ಹಿಂದುಳಿದ ಮೋರ್ಚಾ ಉಪಾಧ್ಯಕ್ಷರಾದ ಬಾಲಕೃಷ್ಣ ಬಾಣಜಾಲು, ಟಿಎಪಿಸಿಎಂಎಸ್ ಅಧ್ಯಕ್ಷ ಕೃಷ್ಣಕುಮಾರ್ ರೈ, ಎಪಿಎಂಸಿ ಸದಸ್ಯರಾದ ಪುಲಸ್ಯ ರೈ, ತ್ರಿವೇಣಿ ಕರುಣಾಕರ ಪೆರೋಡಿ, ಮೋಹನಾಂಗಿ, ಮೇದಪ್ಪ ಗೌಡ, ಕೊರಗಪ್ಪ ಕುಶಾಲಪ್ಪಗೌಡ, ನಾಮನಿರ್ದೇಶಿತ ಸದಸ್ಯ ಬಾಬು ಬಿ ಪುತ್ತೂರು ಬಿಜೆಪಿ ಉಪಾಧ್ಯಕ್ಷೆ ಮೀನಾಕ್ಷಿ ಮಂಜುನಾಥ್ ಉಪಸ್ಥಿತರಿದ್ದರು.










