![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
![](https://puttur.suddinews.com/wp-content/uploads/2023/02/Capture.jpg)
ಪುಣಚ : ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಮಾ.8ರಿಂದ 13ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು ಇದರ ಆಮಂತ್ರಣ ಬಿಡುಗಡೆ ಮತ್ತು ಆಮಂತ್ರಣ ಪತ್ರಿಕೆಯನ್ನು ಮನೆಮನೆಗೆ ಹಂಚುವ ಮಹಾ ಅಭಿಯಾನ ಕಾರ್ಯಕ್ರಮಕ್ಕೆ ಫೆ.5ರಂದು ಚಾಲನೆ ನೀಡಲಾಯಿತು.
ಪುಣಚ ಶ್ರೀ ಮಹಿಷಮರ್ಧಿನಿ ದೇವಸ್ಥಾನದಲ್ಲಿ ದೇವರಿಗೆ ಪೂಜೆಸಲ್ಲಿಸಿ , ಆಡಳಿತ ಸಮಿತಿಯ ಅಧ್ಯಕ್ಷರಾದ ಎಸ್.ಆರ್.ರಂಗಮೂರ್ತಿ, ಬ್ರಹ್ಮಕಲಶದ ಕಾರ್ಯಾಧ್ಯಕ್ಷ ಮಲ್ಯಶಂಕರನಾರಾಯಣ ಭಟ್, ಆಡಳಿತ ಸಮಿತಿಯ ಉಪಾಧ್ಯಕ್ಷ ಮಾರಪ್ಪಶೆಟ್ಟಿ ಬೈಲುಗುತ್ತು,ಆಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀಧರ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ರವಿ ಬಿ.ಕೆ., ಬ್ರಹ್ಮಕಲಶೋತ್ಸವ ಸಮಿತಿಯ ಕೋಶಾಧಿಕಾರಿ ಉದಯ ಕುಮಾರ್ದಂಬೆ, ಊರಿನ ಹಿರಿಯರಾದ ಚ. ಕೃಷ್ಣಶಾಸ್ತ್ರಿ, ಜಗನ್ನಾಥ ರೈ ಬೈಲುಗುತ್ತು, ಈಶ್ವರ ನಾಯ್ಕ ಕಲ್ಲಾಜೆ, ಲಿಂಗಪ್ಪ ಗೌಡ ಅಜೇರು ಮಜಲು ಹರಿಕೃಷ್ಣ ಶೆಟ್ಟಿ ಮೂಡಂಬೈಲು, ಪಂಚಾಯತ್ ಅಧ್ಯಕ್ಷರಾದ ರಾಮಕೃಷ್ಣ ಮೂಡಂಬೈಲು ಮತ್ತಿತರರು ಉಪಸ್ಥಿತರಿದ್ದರು.
ಒಂದೇ ದಿನದಲ್ಲಿ ಪುಣಚ ಗ್ರಾಮದ ಎಲ್ಲಾ ಮನೆಗಳಿಗೂ ಆಮಂತ್ರಣ ವಿತರಿಸಲಾಯಿತು.