ಕಡಬದ ಆಹಾರ ನಿರೀಕ್ಷಕ ಚಂದ್ರ ನಾಯ್ಕ ಕಂದಾಯ ನಿರೀಕ್ಷಕರಾಗಿ ಪದೋನ್ನತಿ-ಪಂಜಕ್ಕೆ ವರ್ಗಾವಣೆ

0

ಪುತ್ತೂರು:ಕಡಬ ತಾಲೂಕು ಕಚೇರಿಯಲ್ಲಿ ಆಹಾರ ನಿರೀಕ್ಷಕರಾಗಿದ್ದ ಚಂದ್ರ ನಾಯ್ಕ ಎನ್. ಕಂದಾಯ ನಿರೀಕ್ಷಕರಾಗಿ ಪಂಜಕ್ಕೆ ವರ್ಗಾವಣೆಗೊಂಡಿದ್ದಾರೆ.

ದಾವಣಗೆರೆ ನಿವಾಸಿಯಾಗಿರುವ ಚಂದ್ರ ನಾಯ್ಕರವರು ಕಳೆದ 13 ವರ್ಷಗಳಿಂದ ಪುತ್ತೂರು ತಾಲೂಕಿನ ಕೋಡಿಂಬಾಡಿ, ಉಪ್ಪಿನಂಗಡಿ, ಸವಣೂರು, ಪುಣ್ಚಪ್ಪಾಡಿಯಲ್ಲಿ ಗ್ರಾಮಕರಣಿಕರಾಗಿ ಕರ್ತವ್ಯ ನಿರ್ವಹಿಸಿದ್ದರು.

ಆರು ತಿಂಗಳ ಹಿಂದೆ ಆಹಾರ ನಿರೀಕ್ಷಕರಾಗಿ ಪದೋನ್ನತಿ ಪಡೆದು ಕಡಬ ತಾಲೂಕು ಕಚೇರಿಗೆ ವರ್ಗಾವಣೆಗೊಂಡಿದ್ದ ಇವರು ಇದೀಗ ಕಂದಾಯ ನಿರೀಕ್ಷಕರಾಗಿ ಪದೋನ್ನತಿ ಪಡೆದು ವರ್ಗಾವಣೆಗೊಂಡಿದ್ದಾರೆ.

LEAVE A REPLY

Please enter your comment!
Please enter your name here