ಕುರಿಯ ಪೊಯ್ಯೆ ಶ್ರೀ ನಾಗರಕ್ತೇಶ್ವರಿ ಸಾನಿಧ್ಯದಲ್ಲಿ ಪ್ರತಿಷ್ಠಾ ಕಲಶಾಭಿಷೇಕ, ಅನ್ನಸಂತರ್ಪಣೆ

0

ಪುತ್ತೂರು: ಕುರಿಯ ಗ್ರಾಮದ ಪೊಯ್ಯೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ನಾಗರಕ್ತೇಶ್ವರಿ ಸಾನಿಧ್ಯದಲ್ಲಿ ಶ್ರೀ ನಾಗರಕ್ತೇಶ್ವರಿ ಕಟ್ಟೆ, ನಾಗನ ಕಟ್ಟೆ, ಗುಳಿಗನ ಕಟ್ಟೆ ಹಾಗೂ ಮಂತ್ರವಾದಿ ಗುಳಿಗನ ಕಟ್ಟೆಯ ಪ್ರತಿಷ್ಠಾ ಕಲಶಾಭಿಷೇಕವು ಕೆಮ್ಮಿಂಜೆ ಬ್ರಹ್ಮಶ್ರೀ ವೇದಮೂರ್ತಿ ತಂತ್ರಿ ಸುಬ್ರಹ್ಮಣ್ಯ ಬಳ್ಳಕ್ಕುರಾಯರ ನೇತೃತ್ವದಲ್ಲಿ ಫೆ.19 ರಂದು ನಡೆಯಿತು.

ಫೆ.18 ರಂದು ಸಂಜೆ ಆಲಯ ಪರಿಗ್ರಹ, ಪ್ರಾರ್ಥನೆ, ಸ್ಥಳ ಶುದ್ಧಿ, ಸ್ತಸ್ತಿ ಪುಣ್ಯಾಹ, ರಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ ಹಾಗೂ ದಿಕ್ಷಾಲಬಲಿ ಸೇರಿದಂತೆ ವಿವಿಧ ವೈದಿಕ ಕಾರ್ಯಕ್ರಮಗಳು ನಡೆಯಿತು. ಫೆ.19 ರಂದು ಬೆಳಿಗ್ಗೆ ಗಣಹೋಮ, ಪ್ರತಿಷ್ಠಾ ಹೋಮ, ನಾಗ ರಕ್ತೇಶ್ವರಿ, ನಾಗ ದೇವರ ಪ್ರತಿಷ್ಠೆ, ಗುಳಿಗ ಹಾಗೂ ಮಂತ್ರವಾದಿ ಗುಳಿಗನ ಪ್ರತಿಷ್ಠೆ ನಡೆದು ಕಲಶಾಭಿಷೇಕ, ಆಶ್ಲೇಷ ಬಲಿ, ತಂಬಿಲ ಸೇವೆ ನಡೆಯಿತು. ಮಧ್ಯಾಹ್ನ ಮಹಾಪೂಜೆಯ ಬಳಿಕ ಭಕ್ತಾದಿಗಳಿಗೆ ಪ್ರಸಾದ ವಿತರಣೆ ನಡೆದು ಅನ್ನಸಂತರ್ಪಣೆ ನಡೆಯಿತು.

ಊರು ಪರವೂರ ನೂರಾರು ಭಕ್ತಾದಿಗಳು ಆಗಮಿಸಿ ಗಂಧ ಪ್ರಸಾದ ಹಾಗೂ ಅನ್ನಪ್ರಸಾದ ಸ್ವೀಕರಿಸಿದರು. ಪೊಯ್ಯೆ ಕುಟುಂಬಸ್ಥರಾದ ಭಾಸ್ಕರ ಪೂಜಾರಿ, ವಿಶ್ವನಾಥ ಪೂಜಾರಿ ಸೇರಿದಂತೆ ಪೊಯ್ಯೆ ಕುಟುಂಬಸ್ಥರು ಭಕ್ತಾದಿಗಳನ್ನು ಸ್ವಾಗತಿಸಿ ಪ್ರಸಾದ ನೀಡಿ ಸತ್ಕರಿಸಿದರು.

ಸನ್ಮಾನ
ಪ್ರತಿಷ್ಠಾ ಕಾರ್ಯಕ್ರಮದ ಮುನ್ನ ದಿನ ನಡೆದ ಕಾರ್ಯಕ್ರಮದಲ್ಲಿ ವಿಶೇಷ ಸನ್ಮಾನ ನಡೆಯಿತು. ಮುಖ್ಯವಾಗಿ ಕುರಿಯ ಏಳ್ನಾಡುಗುತ್ತು ಕೆ.ರಾಧಾಕೃಷ್ಣ ರೈ ಮತ್ತು ಗುಣಶ್ರೀ ಆರ್.ರೈ ಹಾಗೂ ವಿನೋದ್ ರೈ ಕುರಿಯ ಏಳ್ನಾಡುಗುತ್ತುರವರಿಗೆ ಪೊಯ್ಯೆ ಕುಟುಂಬಸ್ಥರಿಂದ ಸನ್ಮಾನ ನಡೆಯಿತು.

LEAVE A REPLY

Please enter your comment!
Please enter your name here