![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ಬೈಕ್ ಹಾಗೂ ಕಾರೊಂದರ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಗಾಯಗೊಂಡಿರುವ ಘಟನೆ ಫೆ.23 ರಂದು ಬೆಳಿಗ್ಗೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬಲ್ಯದಲ್ಲಿ ನಡೆದಿದೆ.
![](https://puttur.suddinews.com/wp-content/uploads/2023/02/4cafe321-0bf0-447e-a8c6-66475e4316cc.jpg)
ಬಲ್ಯ ಗ್ರಾಮದ ಕಕ್ಕೆಮಜಲು ನಿವಾಸಿ ದಿನೇಶ್ ಗಾಯಗೊಂಡವರಾಗಿದ್ದಾರೆ. ಇವರು ಬಲ್ಯದಿಂದ ನೆಲ್ಯಾಡಿಗೆ ಹೋಗಲೆಂದು ಬಲ್ಯ ನೆಲ್ಯಾಡಿ ಕ್ರಾಸ್ ನಲ್ಲಿ ಬೈಕ್ ತಿರುಗಿಸುತ್ತಿದ್ದ ವೇಳೆ ಉಪ್ಪಿನಂಗಡಿಯಿಂದ ಕಡಬ ಕಡೆಗೆ ಬರುತ್ತಿದ್ದ ಕಾರು ಡಿಕ್ಕಿಯಾಗಿದೆ.
![](https://puttur.suddinews.com/wp-content/uploads/2023/02/2208012f-996b-41e1-98c5-ed2720d8e30e.jpg)
ಘಟನೆಯಲ್ಲಿ ಗಾಯಗೊಂಡಿರುವ ದಿನೇಶ್ ಅವರನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.