ಕಡಬ: 62ನೇ ವರ್ಷದ ಏಕಾಹ ಭಜನಾ ಮಹೋತ್ಸವ-ಸಮಿತಿ ರಚನೆ

0

ಗೌರವಾಧ್ಯಕ್ಷ ಹರೀಶ್ ಆರ್. ಅಧ್ಯಕ್ಷ: ಅಜಿತ್ ರೈ ಆರ್ತಿಲ, ಕಾರ್ಯದರ್ಶಿ: ಕಿಶನ್ ಕುಮಾರ್ ರೈ

ಕಡಬ: ಇಲ್ಲಿನ ಶ್ರೀ ದುರ್ಗಾಂಬಿಕಾ ದೇವಸ್ಥಾನದಲ್ಲಿ ನಡೆಯುವ 62ನೇ ಏಕಾಹ ಭಜನಾ ಮಹೋತ್ಸವದ ಸಮಿತಿಯನ್ನು ರಚಿಸಲಾಗಿದ್ದು, ಗೌರವಾಧ್ಯಕ್ಷರಾಗಿ ಕಡಬ ಆರಕ್ಷಕ ಉಪನಿರಿಕ್ಷಕ ಹರೀಶ್ ಆರ್. ಅಧ್ಯಕ್ಷರಾಗಿ ಅಜಿತ್ ರೈ ಆರ್ತಿಲ, ‌

ಕಾರ್ಯದರ್ಶಿಯಾಗಿ ಕಿಶನ್ ಕುಮಾರ್ ರೈ ಪೆರಿಯಡ್ಕ, ಜೊತೆ ಕಾರ್ಯದರ್ಶಿಯಾಗಿ ಯಶೋಧರ ಗೌಡ ಪೂವಳ, ಕೋಶಾಧಿಕಾರಿಯಾಗಿ ಸೀತಾರಾಮ ಗೌಡ ಎ.ಯವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಪ್ರಮುಖರಾದ ಕೃಷ್ಣ ಶೆಟ್ಟಿ ಕಡಬ, ಪುಲಸ್ತ್ಯಾ ರೈ ಕಡಬ, ಪ್ರಕಾಶ ಎನ್ ಕೆ, ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಸೀತಾರಾಮ ಗೌಡ ಪೊಸವಳಿಕೆ, ಸುರೇಶ್ ದೇಂತಾರು, ದುರ್ಗಾಂಬಿಕ ಭಜನಾ ಮಂಡಳಿ ಅದ್ಯಕ್ಷ ಸೋಮಪ್ಪ ನಾಯ್ಕ್, ಜಯರಾಮ ಗೌಡ ಪಡೆಜ್ಜಾರ್ , ಶ್ರೀಕಂಠ ಸ್ವಾಮಿ ಶ್ರೀ ಮಹಾ ಗಣಪತಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಮುತ್ತು ಕುಮಾರ್, ಅಶೋಕ್ ಕುಮಾರ್ ಪಿ, ಸುರೇಶ್ ಕೇವಲ, ಹರೀಶ್ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here