ಶಾರ್ಟ್ ಸರ್ಕ್ಯುಟ್‌ನಿಂದ ಬೆಂಕಿ ಅನಾಹುತ

0

ಕಡಬ: ಬಿಳಿನೆಲೆ ಗ್ರಾಮದ ಪಾಲ್ತಾಜೆ ರಸ್ತೆಯ ನವಜೀವನ ಕಾಲೊನಿಯ ಸಮೀಪ ವಿದ್ಯುತ್ ಶಾರ್ಟ್ ಸರ್ಕ್ಯುಟ್ ನಿಂದ ಕಾಡ್ಗಿಚ್ಚು ಹಬ್ಬಿದ ಘಟನೆ ನಡೆದಿದೆ.

ಮಾಹಿತಿ ತಿಳಿದ ಶೌರ್ಯ ವಿಪತ್ತು ನಿರ್ವಹಣಾ ಮರ್ದಾಳ ಘಟಕ ಬಿಳಿನೆಲೆ ವಲಯದ ಸದಸ್ಯರು ಸ್ಥಳೀಯರ ಸಹಕಾರದಲ್ಲಿ ಬೆಂಕಿ ನಂದಿಸಿದರು. ಅಗ್ನಿ ಶಾಮಕ ದಳದವರೂ ಆಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು.

ಈ ಸಂದರ್ಭದಲ್ಲಿ ಶೌರ್ಯ ಘಟಕದ ಸದಸ್ಯರಾದ ಭವಾನಿಶಂಕರ, ವಿನೋದ್ ಕೆ.ಸಿ., ರಾಜೇಶ್, ಭರತ ಎಸ್., ಬಿಳಿನೆಲೆ ಪಂಚಾಯತು ಅಧ್ಯಕ್ಷ ಶಿವಶಂಕರ್, ಮೆಸ್ಕಾಂ ಲೈನ್‌ಮೇನ್ ರಮೇಶ್, ಅಗ್ನಿಶಾಮಕ ದಳದ ಸಿಬ್ಬಂದಿಗಳು, ಅರಣ್ಯ ಅDiಕಾರಿಗಳು, ಸಿಬ್ಬಂದಿಗಳು, ಸಾರ್ವಜನಿಕರು ಸಹಕರಿಸಿದರು.

LEAVE A REPLY

Please enter your comment!
Please enter your name here